ವರ್ಷ ೨೦೧೫-೧೬ ರ ಸಾಲಿನ ಮೈಸೂರ್ ಅಸೋಸಿಯೇಶನ್, ಮುಂಬಯಿ, ಬಂಗಾರದ ಹಬ್ಬದ ದತ್ತಿ ಉಪನ್ಯಾಸ ಕಾರ್ಯಕ್ರಮ !

ಮೈಸೂರ್ ಅಸೋಸಿಯೇಷನ್ ಮುಂಬಯಿ ಹಾಗೂ ಮುಂಬಯಿ ವಿಶ್ವವಿದ್ಯಾಲಯದ ಕನ್ನಡ ವಿಭಾಗ ಸಂಯುಕ್ತವಾಗಿ ಆಯೋಜಿಸುತ್ತಿರುವ ದತ್ತಿ ಉಪನ್ಯಾಸಕ್ಕೆ ಹೆಸರಾಂತ ಕನ್ನಡದ ಕವಿ, ಡಾ. ಜಯಂತ್ ಕಾಯ್ಕಿಣಿಯವರು ಈ ವರ್ಷದ ಆಹ್ವಾನಿತ ಉಪನ್ಯಾಸಕಾರರು :  (ಎರಡನೆಯ ದಿನ, ೧೭,ರವಿವಾರ, ಜನವರಿ, ೨೦೧೬) 

Link :    http://www.daijiworld.com/news/news_disp.asp?n_id=376952


ಮುತ್ತುಸ್ವಾಮಿದೀಕ್ಷಿತರ  ಕೀರ್ತನೆಯ ಲಿಂಕ್  :

https://www.youtube.com/watch?feature=player_embedded&v=7PKSxhsEbWI

 ಪೂರ್ಣಿಮಾ ಶೆಟ್ಟಿ ಸಂಚಾಲಕಿಯವರು,  ಡಾ.ಜಿ.ಎನ್.ಉಪಾದ್ಯರವರಿಂದ  ಪ್ರಾಸ್ತಾವಿಕ ಭಾಷಣಕ್ಕೆ ಕರೆನೀಡಿದರು  ಡಾ. ಉಪಾಧ್ಯ ಮಾತನಾಡುತ್ತಾ ಮೈಸೂರ್ ಅಸೋಸಿಯೇಶನ್ ಮತ್ತು ಮುಂಬಯಿ ವಿ.ವಿ. ದ ಕನ್ನಡ ವಿಭಾಗದ 
ನಾನು ಮತ್ತು ನನ್ನ ಸಾಹಿತ್ಯದ ಬಗ್ಗೆ ಮಾತಾಡುತ್ತಾ , ಕಡಲೂರಿನ ಬಗ್ಗೆ,ಸ್ನೇಹದ ಕಡಲು,ಸಾಹಿತ್ಯ ಯಾನವಿವಿಧ ಮುಖಗಳ ಅಧ್ಯಯನ, ಬಿಲ್ಲವರ ಅಸೋಸಿಯೇಶನ್ ನಿಂದ ಗುರುನಾರಾಯಣ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಡಾ. ನೆಂಜೂರ್, ಕವಿ ರತ್ನಾಕರ ಶೆಟ್ಟಿ,ಹಾಗೂ ಮಿತ್ರ ವೆಂಕಟ್ರಾಜ್ ದಂಪತಿಗಳು ಸಭೆಯಲ್ಲಿ ಹಾಜರಿದ್ದಾರೆ.  ಜಯಂತರದು , ೬೦ ರ ಹರಯದ ರಂಜಿತವ್ಯಕ್ತಿತ್ವ.ಸಿನಿಮಾ ರಂಗಭೂಮಿ ತೆರೆದ ಕಣ್ಣಿನಿಂದನೋಡುವ ವ್ಯಕ್ತಿತ್ವ,ಅರ್ ರ್ಬನ್ ಲು ಕ್ ಹಿರಿಯ ಸಾಹಿತಿಗಳಾದ  ಬಲ್ಲಾಳ, ಚಿತ್ತಾಲರ ನಗರ ಜನಪದ ಸೃಷ್ಟಿಗೆ ಸ್ವಲ್ಪ ಭಿನ್ನ. ಮುಂಬೈ ನಗರದ ಗಲ್ಲಿಗಲ್ಲಿಗಳ ಜೀವನ ದರ್ಶನವನ್ನು ಆಯ್ಕೆ ಮಾಡಿಕೊಂಡು ಅದನ್ನು ತಮ್ಮ ಕತೆಗಳಲ್ಲಿ ಹೆಣೆದಿದ್ದಾರೆ. ಜಯಂತರ ಒಟ್ಟಾರೆ ಸಾಹಿತ್ಯವನ್ನು ಓದುಗರಾಗಿ ನೋಡಿ  ಡಾ ಮಮಾತಾ ರಾವ್  ಪುರಾಣ ಮಾದರಿಯ ಮರುಸೃಷ್ಟಿ ಎನ್ನುತ್ತಾರೆ  ಡಾ. ಮಮತಾರಾವ್ ಕೃತಿ ಓದಲು ಮುದಕೊಡುತ್ತದೆ.ಜಯಂತ್ ಕಥಾವರಣ,ಅಂಕಿತ ಪುಸ್ತಾಲಯದ ಪ್ರಕಟನೆ,ಕನ್ನಡ ಸಾಹಿತ್ಯದಲ್ಲಿ ಹೊಸನೀರನ್ನು ಹಾಯಿಸಿದ್ದಾರೆ. ಸಂವೇದನೆಗಳಿಗೆ ಪೋಷಣೆ ನೀಡುತ್ತಾರೆ.
 ಡಾ. ಜ್ಯೋತಿ ಸತೀಶ್, ಕೃತಿ ಪರಿಚಯ : ರಮಾಉಡುಪ, ನಿಜವಾಗಿಯೂ ಓದಲೇ ಬೇಕಾದ ಕೃತಿ. ದೃಷ್ಟಿ ಕೋನ ಬದಲಾಗಿ,ಉತ್ತಮ ವಿಮರ್ಶಕಿ, ಸುತ್ತಮುತ್ತ್ಲ ಸಾಮಾನ್ಯ ಜಗತ್ತಿನ ಆಗು ಹೋಗುಗಳನ್ನು ತೆರೆದ ಕಣ್ಣಿನಿಂದ ವೀಕ್ಷಿಸಿಸಹಜತೆ, ಸರಳತೆ, ೭೧ ಸಣ್ಣಕತೆ,೭ ಕಥಾ ಸಂಕಲನ,೨೦ ಗೋಕರ್ಣಕ್ಕೇ ಸೀಮಿತವಾದದ್ದು ಉಳಿದವೆಲ್ಲಾ ಮುಂಬಯಿನರದ್ದು.,ಜೀವನರಂಗದ ಅನಾಮಿಕ ಸಂವೇದನೆಗಳು ಹಿರಿಯ ಸಾಹಿತಿ, ಉಡುಪರು ತಮ್ಮ 'ಸಾಕ್ಷಿ ಪತ್ರಿಕೆ'ಯಲ್ಲಿ ಪ್ರಕಟಿಸುತ್ತಾರೆ.೨೩ ವರ್ಷ ಮುಂಬಯಿ ಜೀವನದ ಹಿನ್ನೆಲೆ,ಭಾಷಾ ಶೈಲಿ ಅನನ್ಯ.ಒಂದು ಕೊಲೆಜ್  ತರಹ ಕಾಣಿಸುತ್ತದೆ.ಸೂಕ್ಷ್ಮ ಸಂವೇದನೆ,ಅನಾವರಣವಾಗುತ್ತಾ ಸಾಗುತ್ತದೆ. ಜಯಂತ್ ಒಮ್ಮೊಮ್ಮೆ ತಮ್ಮ ಕೃತಿಗಳನ್ನು ಒಳ  ಕರ್ನಾಟಕದ ವಿಮರ್ಶಕರು ಓದದೆ ನ್ಯಾಯ ಒದಗಿಸಿಲ್ಲ, ಎನ್ನುವ ಕೊರತೆಯನ್ನು ವ್ಯಕ್ತಪಡಿಸುತ್ತಾರೆ.  ಮರು ಓದು ಚರ್ಚೆ ನಡೆದಿಲ್ಲ. ಪೂರ್ಣಿಮಾ ಶೆಟ್ಟಿ : ಕನ್ನಡ ಚಲನಚಿತ್ರಲೋಕದಲ್ಲಿ ಆಸಕ್ತಿ.ಸಂಭಾಷಣೆ ಹಾಡುಗಳು ನೀರವವಾಗಿ ಕಳೆದುಕೊಂಡ ಸಮಯದಲ್ಲಿ ಹೊಸತನವನ್ನು ತಂದುಕೊಟ್ಟ ಶ್ರೇಯಸ್ಸು. ಜಯಂತ್ ಕಾಯ್ಕಿಣಿ , ಅಶ್ವಿನಿ ದೇವತೆಗಳನ್ನು ಕಮಲಾ ಉಪಾದ್ಯ,ನಿಂಜೂರ್ ಜೇನುತುಪ್ಪದ ಬಾಟಲಿಯ ತರಹ ಪಕ್ವತೆ, ಬೆಳಸಿದ ಹಿರಿಮೆ,ಹೆಜ್ಜೆ ಇಟ್ಟದ್ದು ಅವರ ಸಾಹಿತ್ಯ ಓದಿಕೊಂಡು ಪ್ರಭಾವಿತರಾಗಿದ್ದಾಗ, ಬಯೊ ಚೆಮಿಸ್ಟ್ರಿಯಲ್ಲಿ ಒಂದು ಎನ್ಝೈಮ್ ನ್ನು ಹೆಸರಿಟ್ಟಿದ್ದಾರೆ.ಮಮತಾರಾವ್ ನ್ನು ಅಭಿನಂದಿಸಿ ಅವರೊಬ್ಬ ಮುಕ್ತ ಓದುಗರಾಗಿ ಯಾವುದೇ ಪೂರ್ವಾಗ್ರಹಗಳಿಗೆ ಬಲಿಯಾಗದೆ ಕೃತಿರಚಿಸಿರುವುದು ಸಮಾಧಾನಕೊಡುತ್ತದೆ. ಇಂತಹ ಅನಾಮಿಕ ಓದು ಅವರಿಗೆ ಪ್ರಿಯ. ವಿನೀತ, ಸೀರಿಯಸ್ ಆಗಿ ಬರೆದಿಲ್ಲ. ೬೦ ವರ್ಷ ಆಯ್ತಲ್ಲಾ ಇಮ್ಪುಲ್ಸಿವೆ ಆಗಿ ಬರೀಬೇಕು.ಇಂತಹ ಸ್ಪಂದನೆ ರಹಿತ ಅವರಿಗೆ ಬಂಡವಳವಾಯಿತು.ತಮಗೆ ಏನು ಬೇಕೋ ಅದನ್ನೇ ಬರೆಯುತ್ತಾ ಸಾಗಿದರು.ಗೋಕರ್ಣದಲ್ಲಿ ಬರೆದ ಕಾಯಸವೇ ಕೈಲಾಸ, ಕೈಲಾಸವೇ ಕಾಯಕ,ತಂದೆ ಒಬ್ಬ ಲೇಖಕ, ಕಡಲು ಪ್ರೇರಕ,ಅವರಮನೆಗೆ ತಂದೆಯವರನ್ನು ಭೇಟಿಮಾಡಲು ಬರುತ್ತಿದ್ದ ಸಾಹಿತಿಗಳು ಬರೀಮಾತಾಡುವವರು ಅನ್ನಿಸಿರಬೇಕು. ಆದರೆ ತಂದೆ ಒಬ್ಬ ವಿಶಿಷ್ಟ ವ್ಯಕ್ತಿಯಾಗಿ ಕಂಡರು.ಒಮ್ಮೆ ಬೆಂಗಳೂರಿನ ಕನ್ನಡ ಸಾಹಿತ್ಯ ಪರಿಶತ್ತಿನಿಂದ ಆಹ್ವಾನ ಪತ್ರ ಅಂಚೆಯಲ್ಲಿ ಬಂತು. ಯಾವುದೋ ಸಮಾರಂಭಕ್ಕೆ ಸನ್ಮಾನ ಆದರೆ ತಮ್ಮ ಶಿಷ್ಯನೊಬ್ಬ ದೋಣಿ ಉದ್ಘಾಟನೆಗೆ ಒಪ್ಪಿಕೊಂಡಿದ್ದೇನೆ ಕ್ಷಮಿಸಿ ಎಂದು ಬರೆದ ಪೋಸ್ಟ್ ಕಾರ್ಡನ್ನು ಅಂಚೆಪೆಟ್ಟಿಗೆ ಹಾಕಲು ಹೇಳಿದರು. ಓದಿದಾಗ ದಿಗ್ಭ್ರಮೆ. ಅಂತಹ ಸುಸಂಧಿಯನ್ನು ಕಳೆದುಕೊಂಡು ಹಳ್ಳಿಯ ಯಾರೋ ಹುಡುಗನ ದೋಣಿ ಒಪ್ಪಿಕೊಂಡರಲ್ಲ ಎಂತ ಅವಿವೇಕ. ಈ ಪ್ರಸಂಗ ಅವರ ಕಲಕಿದರೂ ಎನೋಮಹತ್ವವನ್ನು ಮನಗಂಡರು. ೫ನೆಯ ಇಯತ್ತೆಯಲ್ಲಿ ಓದುವಾಗ ಅವರ ಸೋದರಮಾವನೇ ಉಪಾಧ್ಯರು. ಅವರು ಅತಿ ಶಿಸ್ತಿನ ವ್ಯಕ್ತಿ.ಪರೀಕ್ಷೆ ದಿನ ಅವರು ಮಾಡಿದ ಎಲ್ಲಾ ಹುಡುಗರನ್ನೂ ಬರೆಯಲು ನಿಲ್ಲಿಸಲು ಹೇಳಿ ಅವರನ್ನೆಲ್ಲಾ ಆಲದ ಕೆರೆಯ ಬಳಿ  ಕರೆದುಕೊಂಡು ತಮ್ಮ ಊರಿನ ಕೆರೆಅಂಗಳಕ್ಕೆ ಹೋದರು.ಅಲ್ಲಿ ಆಕಸ್ಮಿಕವಾಗಿ ಒಂದು ಲಾರಿ ಭಾವಿಯಲ್ಲಿ ಬಿದ್ದಿತ್ತು. ಆಗ ಡ್ರೈವರ್ ಹೊರಗೆ ಹೇಗೆ ಬಂದರು ಕಂಡಕ್ಟರ್ ಮತ್ತು  ಒಳಗಿನ ಪ್ರಯಾಣಿಕರು  ಹೇಗೆ ಜೀವಂತವಾಗಿ ಹೊರಗೆ ಬಂದರು ಎನ್ನುವ ಬಗ್ಗೆ ಪ್ರತಿ ವಿದ್ಯಾರ್ಥಿಯೂ ಒಂದು ಪ್ರಬಂಧ/ಲೇಖನ ಬರೆದು ಕೊಡಬೇಕೆಂದು ಆಜ್ಞೆ ಮಾಡಿದರು. ಯಾರು ಚೆನ್ನಾಗಿ ಬರೆದರೋ ಅವರು ಒಳ್ಳೆಯ ಅಂಕ ಗಲಿಸುತ್ತಾರೆ.  ಮಾತ್ತೊಮ್ಮೆ, ಪ್ರತಿಯೊಬ್ಬ ಹುಡುಗನಿಗೂ ಒಂದು ಖಾಲಿ ಕಾಗದ ಕೊಟ್ಟು ಅದನ್ನು ಅವರು ಕೇಳಿದಾಗ ವರ್ಷದ ಕೊನೆಗೆ ಪ್ಪಿಸಬೇಕು ಯಾರು ಅವರಿಗೆ ಬಹುಮಾನ. ಮನೆಗೆ ಬರುತ್ತಿದ್ದ ಹುಡುಗ ಹೆಚ್ಚು ಎಣ್ಣೆಹಾಕಿ ತಲೆಬಾಚುತ್ತಿದ್ದ. ಒರಗಿದಾಗ ಗೋಡೆಗೆ ಅಂಟಿತ್ತು. ಆ ಗುರುತನ್ನು  ಹಾಗೆಯೇ ಇಟ್ಟಿದ್ದರು. ತಾಯಿಯವರಿಗೆ ಅದೇ ಹುಡುಗ ನೆನಪಿಗೆ ಬರುತ್ತಿದ್ದ  .ವಾಮನ ಪೈಎಂಬ  ಹುಚ್ಚ. ಬೆಳಿಗ್ಯೆ, ಸೂರ್ಯನ ಎದುರಿಗೆ 'ನಿಂತು ಬಾ' ಎಂದು ಕರೆಯುತ್ತಿದ್ದ. ಸಾಯಂಕಾಲ ಕಡಲಿನ ತಟಕ್ಕೆ ಹೋಗಿ   'ಬೈ' ಇನ್ನು ನೀನು ಹೋಗು ,ಹೋಗು ಎಂದು ಕೂಗುತ್ತಿದ್ದ. ಅವನಿಗೆ ತನ್ನ ಮಾತಿನಂತೆ ಸೂರ್ಯನ ಚಲನೆ ಆಗುತ್ತದೆ ಎಂಬ ಸಮಾಧಾನ  ಸಂತೋಷ. 

ಧಾರವಾಡದಲ್ಲಿ  ವಿದ್ಯಾಭ್ಯಾಸ : 

ಮುಂಬಯಿ ನಗರಕ್ಕೆ ಪಾದಾರ್ಪಣೆ :

ತೇಜಸ್ವಿ, ತಿರುಮಲೇಶ್, ಎ.ಕೆ.ರಾಮಾನುಜಮ್, ಪ್ರಭಾವ ಹೆಚ್ಚು.ದಾದರ್ ಬೀಚಿನ ಬಳಿ  ಎಪಿಲಪ್ಸಿ(ಧನುರ್ವಾಯು) ಪೀಡಿತ ವ್ಯಕ್ತಿ ತನ್ನ ಕೈನಲ್ಲಿ ಒಂದು ಹಾಳೆಯಲ್ಲಿ  ಅರ್ಧ ಅಸ್ಪಷ್ಟ  ಪೆನ್ಸಿಲ್ ಗುರುತನ್ನು ಜನರಿಗೆ ತೊರಿಸುತ್ತಿದ್ದ.  ಆದರೆ ಅಲ್ಲಿ ನೆರೆದಿದ್ದ  ಜನ ಭಾವಿಸಿದ್ದು ಅವನೊಬ್ಬ  ಆತಂಕವಾದಿಯೆಂದು. ಯಾರಿಗೂ ಅರ್ಥವಾಗದೇ ಗೊಂದಲದಲ್ಲಿದ್ದಾಗ  ಕೊನೆಗೆ ಅಲ್ಲಿನ ಚಿಕ್ಕ ಹುಡುಗ ಹೇಳಿದ ,  ಅದು ಒಂದು ಮಾಪು ಎಂದು.  ತನ್ನ ಮಗನ ಚಪ್ಪಲಿ ತರಲು ಆತ ಹಾಕಿದ್ದಿರಬೇಕು ನಮ್ಮ ಮನಸ್ಸಿನಲ್ಲಿ ಕಸ ತುಂಬಿದೆ. ಓದುವಾಗ ಬರೆಯುವಾಗ ಮಾತ್ರ ಸಾಹಿತಿ.ಬರೆಯುವಾಗ ಮಾತ್ರ ಸಾಹಿತಿ.ಚಿತ್ತಾಲರನ್ನು ನೋಡಲು ಹೋದಾಗ ಅವರು ಬರೆಯಲು ಸಾಧ್ಯವಿಲ್ಲ. 'ಬದುಕಿತಾನೇ ಏನು ಪ್ರಯೋಜನ' ಎಂದರು.ಬಹುಭಾಷಾ ಸಂವೇದನೆ ಸಿಕ್ಕಿತು.ಸೆನ್ದ್ ಥಮೆ ತೊ ಮ್ಯ್ ನೊವೆಲ್ ಇಫ಼್ ಥೆಯ್ ಅಗ್ರೀ.ದೊಡ್ಡಮ್ಮನಿಗೆ ಮಕ್ಕಳಿಲ್ಲ.ಬೆರೆಯವರ ಮನೆ ಅಡುಗೆ ಬಾಣಂತನ,ಮನೆಕೆಲಸ್ ಇತ್ಯಾದಿ ಮಾಡೆತಮ್ಮ ಜೀವನ ಮುಗಿಸಿದರು.ಗಂಡ ಎಲ್ಲೋ ಹೋಗೋರು ತಿಂಗಳುಗಟ್ಟಲೆ ಮನೆಗೆ ಬರುತ್ತಲೇ ಇರಲಿಲ. ಕಾಗದ ಬಂತು.ಲಂಬಾಣಿಕೇರಿಯಲ್ಲಿ ತೀರಿಕೊಂಡ.ವಿಷಯ ಒದಿ ಕಂಗಾಲಾದರು. ತಿಳಿಸಲಿಲ್ಲ.ಆದರೆ ಹೇಗೋ ಇಲ್ಲದಿದ್ದಾಗ ಓದಿದರು.ಅಮ್ಮನಿಗೆ ಒಬ್ಬ ಮನೆ ನರ್ಸ್ ವ್ಯವಸ್ಥೆ ಮಾಡಲು ಆಶ್ರಮಕ್ಕೆ ಹೋದರು. 
 ಡಾ. ಜಿ. ಎನ್. ಉಪಾಧ್ಯ ಪ್ರಾಸ್ತಾವಿಕ ಭಾಷಣ ಮಾಡುತ್ತಿದ್ದಾರೆ.

               .

ರಮಾ ಉಡುಪ, ಡಾ. ಮಮತಾ ರಾವ್ ಬರೆದ ಪುಸ್ತಕ 'ಜಯಂತ್ ಕಾಯ್ಕಿಣಿ ರವರ ಕಥಾನಾವರಣ' ಪುಸ್ತಕದ ಬಗ್ಗೆ ಕೃತಿ ಪರಿಚಯ ಮಾಡುತ್ತಿದ್ದಾರೆ.  ರಮಾ ಉಡುಪರ ಲೇಖನ, ನೇಸರು ಸಂಚಿಕೆಯಲ್ಲಿ (ಜನವರಿ, ೨೦೧೬, ಪುಟ-೯&೧೦) ಓದಿ. https://www.facebook.com/photo.php?fbid=762815770519513&set=pcb.548706338629914&type=3&theater  Nesaru, January, 2016, ಜಯಂತ್ ಕಾಯ್ಕಿಣಿಯವರ ಕಥನಾವರಣ, ಕೃತಿಕಾರರು-ಡಾ. ಮಮತಾ ರಾವ್, ಕೃತಿಯನ್ನು ಕುರಿತು : ರಮಾ ಉಡುಪ, ಸಹ ಸಂಶೋಧಕಿ, ಮುಂಬಯಿ ವಿಶ್ವವಿದ್ಯಾಲಯ 

ಮುಂಬಯಿಯ ಕಥೆಗಳಲ್ಲಿ  ಕಂಡು ಬರುವ  ವಸ್ತುಗಳನ್ನು ಕೆಳಗೆ ಕಂಡ ರೀತಿಯಲ್ಲಿ  ವಿಂಗಡಿಸಿದ್ದಾರೆ. 
*  ಗೆಳೆತನ,  
*  ಪುಟಾಣಿ ಲೋಕ,
*  ಬದುಕಿನ ಪಯಣದಲ್ಲಿ ಭಿನ್ನ ಮಾರ್ಗದ ಶೋಧನೆ, 
*  ಸಾಮಾನ್ಯರ ಅಸಮಾನ್ಯಕಥೆಗಳು ಎಂಬುದಾಗಿ,
* ನಗರ ಸಂವೇದನೆಗಳನ್ನೊಳಗೊಂಡ ವಿಶಿಷ್ಟ ಕಥೆಗಳು

ಮುಂಬಯಿಗೆ ಬರುವ   ಪರ್ಯಟಕನೊಬ್ಬನಿಗೆ ಮುಂಬಯಿಕೊಡುವ ದರ್ಶನ ಬಿನ್ನ. ವಿಶ್ವದ ಕೊಳಕುಗಲ್ಲಿಗಳಲ್ಲಿ ಅತಿ ದೊಡ್ಡದೆಂದು ಹೆಸರುಮಾಡಿರುವ  ಧಾರಾವಿಯ ಜನಸಂದಣಿಯ ಅಂಕುಡೊಂಕಿನ ಗರ್ದಿ ಗಲ್ಲಿಗಳು, ಟ್ರಾಫಿಕ್, ಕೊಳಕು, ಧೂಳು, ಬಿಸಿಲು, ಬೆವರು ಆದರೆ ಜನರಿಗೆ ಕಾಣುವ ರೀತಿ ಅನನ್ಯವಾದದ್ದು. ಕಾಯಕದ ಕೈಲಾಸದಂತೆ. ಬಹುವಚನದ ನಗರಿಯಾಗಿದ್ದು ಏಕವಚನದಲ್ಲಿ ಮಾತನಾಡುತ್ತದೆ. ಕಾಯಕದಿಂದಾಗಿ ಈನಗರದ ಜನಜಾತಿ,ಮತ ಧರ್ಮ ಅಂತಸ್ತುಗಳ ಗೋಡೆಯನ್ನು ದಾಟುತ್ತದೆ. ಅಪರಿಚಿತರ ಮುಖಗಳನ್ನು ಪರಿಚಯಿಸಿಕೊಳ್ಳುವಲ್ಲಿ ಅವರ ಮನೋವ್ಯಾಪಾರಗಳಲ್ಲಿ ಆಸಕ್ತಿ.
ಸಣ್ಣಪುಟ್ಟ ಗ್ರಾಮಗಳಿಂದ ರಂಗುರಂಗಿನ ಕನಸುಗಳನ್ನು ಹೊತ್ತು ಮುಂಬಯಿಗೆ ಓಡಿಬಂದವರನೇಕರು. ಇಂತಹ ಸನ್ನಿವೇಷಗಳನ್ನು ಆಧರಿಸಿ ಕಥೆಯಾಗಿಸುವಬಗ್ಗೆ ಜಯಂತರ ಆಸಕ್ತರಲ್ಲ. ಬಂದ ಜನ ತಮ್ಮ ಬದುಕನ್ನು ಎಷ್ಟರಮಟ್ಟಿಗೆ ಒಡ್ಡಿಕೊಂಡರು ಎನ್ನುವುದು ಅವರಿಗೆ ಪ್ರಿಯವಾಗುತ್ತದೆ. ತಮ್ಮ ಸೂಕ್ಷ್ಮಗ್ರಾಹಿ  ಕಣ್ಣುಗಳು ಅವೆಲ್ಲವನ್ನೂ ಗುರುತಿಸುತ್ತವೆ. ತಮ್ಮ ಕಣ್ಣಿಗೆ ಬಿದ್ದ ಹಲವಾರು ಮನುಷ್ಯರ ಪಾಡನ್ನು ಅರಿಯುವ ಆಸೆ ಅವರದು :

೧. ಸಿನಿಮಾ ಲೋಕದ ಮಿನುಗುತಾರೆಯರ ಹಿಂದಿರುವ ಸ್ಟಂಟ್ ಕಲಾವಿದರು, ಎಕ್ಸ್ ಟ್ರಾಗಳು, ಸರ್ಕಸ್ ನ ಜೋಕರ್ ಗಳು, ಟ್ರೆಪೀಜ್ ಆರ್ಟಿಸ್ಟ್ಸ್, ಮೃತ್ಯುಕೂಪದಲ್ಲಿ ಮೋಟರ್ ಸೈಕಲ್ ನಡೆಸುವವರು,
೨. ಅಂಗವಿಕಲರು, ಭಂಗಾರು ದುಕಾನಿನಲ್ಲಿದ್ದು ಕನಸುಕಾಣುವ ಮುಚ್ಚೀಮಿಯಾನಂತಹವರು, ರಾತ್ರಿ ರಸ್ತೆಬದಿಯಲ್ಲಿದಣಿದವರಿಗೆ ಹೊಟ್ಟೆತುಂಬಾ ಊಟ ನೀಡುವ ತಳ್ಳುಗಾಡಿಯವರು,ಚಹಾವಾಲಾಗಳು, ಥಿಯೇಟರ್ ನಲ್ಲಿ ಕತ್ತಲಲ್ಲಿ ಬ್ಯಾಟರಿಯ ಪ್ರಕಾಶ ಬೀರಿ ಸೀಟು ತೋರಿಸುವವರು,
೩.  ಕೆಂಪುದೀಪದ ಬೀದಿಯಲ್ಲಿರುವ ಪಂಜರದಂತಹ ಸಲಾಕೆ ಗೂಡುಗಳಲ್ಲಿ ಮೈಮಾರಿ ಬದುಕುವ ಹೆಣ್ಣುಜೀವಿಗಳು, ರಸ್ತೆ ಬದಿಯ ಬದಿಯಜೋಪಡಿಯಲ್ಲಿ ವಾಸಿಸುವ ಜನರು,
೪.  ನಾಜೂಕಾಗಿ ಅನಾನಸು ಕೆತ್ತಿ ಬೇಡವಾದ ಭಾಗಗಳನ್ನು  ಮಕ್ಕಳಿಗಾಗಿಕಾದಿರಿಸುವ ಮುದುಕ,
೫. ರಸ್ತೆಯಲ್ಲಿ ಚಿತ್ರಿಸಿದ ಸೀಮೆಸುಣ್ಣದ ಸಾಯಿಬಾಬಾರನ್ನು ಉಳಿಸಲು ಮಳೆಯಲ್ಲಿ ನೆನೆಯುತ್ತಾ, ಹೆಣೆಗಾಡುವ ಪುಟ್ಟ ಬಾಲಕಿ,
೬. ತನ್ನ ಅವಿವಾಹಿತ ಮಗಳ ಕನ್ಯತ್ವದ ದಾಖಲೆಯನ್ನು ಹಿಡಿದುಕೊಂಡು ಊರಿಡಿ ತಿರುಗುವ ಕನ್ಯಾಪಿತೃ,
೭. ಸಮಾಜದಲ್ಲಿ ತುಸು ಮೇಲ್ಮಟ್ಟ ಪಡೆದ ಕೂಡಲೇ ತನ್ನನ್ನುದೂರ ಮಾಡುವವನ ಸೇವೆಯನ್ನು ನಿರ್ವಂಚನೆಯಿಂದ ಮಾಡುವರೂಮ್ ಪಾರ್ಟ್ನರ್, 
೮. ಬಿಯರ್ ಬಾರ್ ನಲ್ಲಿ ಕುಣಿಯುವ ದಾನ್ಸ್ ಬಾಲೆಯರು,
೯. ರಿಕ್ಷಾ-ಟ್ಯಾಕ್ಸಿ-ಟ್ರಕ್ ಡ್ರೈವರ್ ಗಳು,
ಇಂತಹ ಹಲವಾರು ಸನ್ನಿವೇಶಗಳು ಜಯಂತರ ಕೃತಿಗಳಲ್ಲಿ ಜೀವಂತಿಕೆಯಿಂದ ಮಿಂಚುತ್ತಾರೆ.ತಾವು ಕಂಡ ಪ್ರತಿವ್ಯಕ್ತಿಯಮೂಲಕ ಮನುಜಕುಲದ ಪಾಡನ್ನು ತಿಳಿಯುವ ದಾಹ ಕಾಣುತ್ತದೆ. ಅದರಿಂದ ವಿಶಿಷ್ಟ ಭಾಷೆ ಮತ್ತು ರೂಪಕಗಳನ್ನೊಳಗೊಂಡ ನಗರ ಪ್ರಜ್ಞೆಯ ಕತೆಗಳು ಜಯಂತರ ಸರಕಿನಲ್ಲಿ ಹೇರಳವಾಗಿ ದೊರೆಯುತ್ತವೆ. ಕನ್ನಡಕ್ಕೆ ಅಪರಿಚಿತ ಮುಖಗಳ ಪರಿಚಯ ಮಾಡಿಕೊಡುತ್ತಾರೆ. ಅವರ ಕತೆಗಳು ಒಂದು ’ದೊಡ್ಡ ಕೊಲೇಜ್’ ತರಹ ಮಹತ್ವವನ್ನು ಪಡೆದಿದೆ. ಅದರಲ್ಲಿ ಕಾಣಿಸಿಕೊಳ್ಳುವ ಕತೆಗಳ ಸೂಕ್ಷ್ಮ ಸಂವೇದನೆಗಳ ಸಂಖ್ಯೆ ಅಪಾರ. 
ಜಯಂತ್ ಕಾಯ್ಕಿಣಿಯವರ ವಿಶೇಷತೆ :
ಎಲ್ಲವನ್ನೂ ತೆರೆದಕಣ್ಣುಗಳಿಂದ ಮಗುವಿನ ಕುತೂಹಲದಿಂದ ನೋಡುವ ಪರಿ ಅನನ್ಯ. ತಮ್ಮ ಸ್ನೇಹಪರ ಮನೋಭಾವನೆಗಳಿಂದ ಅತ್ಯಂತ ಭಿನ್ನವಾದ ಆಶಯಗಳನ್ನು ತಮ್ಮ ಕತೆಗಳಲ್ಲಿ ನೀಡುವ ಪ್ರಯತ್ನದಲ್ಲಿ ಸಫಲರಾದರು.
ಜಯಂತರ ಅಸಾಧಾರಣ ಪ್ರತಿಭೆಯನ್ನು ಒಬ್ಬ ಮುಕ್ತ ಓದುಗರಾಗಿ ಗುರುತಿಸಿದ ಮಮತಾ ರಾವ್ ಕತೆಗಳ ಪಾತ್ರಗಳನ್ನಷ್ಟೆ ಅಲ್ಲದೆ ಅವರ ವ್ಯಕ್ತಿತ್ವದ ಬಗ್ಗೆಯೂ ಬೆಳಕು ಚೆಲ್ಲಿದ್ದಾರೆ. "ಕೆಲವೊಮ್ಮೆ ಕರ್ನಾಟಕದಲ್ಲಿ  ತಮ್ಮ ಸಮಗ್ರ ಕೃತಿಗಳ ಬಗ್ಗೆ ಆಳವಾಗಿ ವಿಮರ್ಶೆಗಳು ನಡೆದಿಲ್ಲ"  ಎನ್ನುವ  ಜಯಂತರ ಅಂತರಂಗದ ತುಸು ವಿಷಾದ ನುಡಿಯ ಅಪವಾದದಂತೆ  ಡಾ. ಮಮತಾ ರಾವ್ ಜಯಂತ ಕಾಯ್ಕಿಣಿಯವರ 'ಕಥನಾವರಣ'ದಲ್ಲಿ ಅತ್ಯುತ್ತಮ ವಿಮರ್ಶೆಮಾಡಿ, ಆ ಕೊರತೆಯನ್ನು ನೀಗಿಸಿದ್ದಾರೆ", ಎನ್ನುವುದು ಅವರ ಗೆಳತಿ  'ರಮಾ ಉಡುಪ'ರ ಅಂಬೋಣ. 
ಜಯಂತ್ ಡಾ. ವ್ಯಾಸರಾವ್ ನಿಂಜುರ್ ರವರನ್ನು ಅಭಿನಂದಿಸುತ್ತಿದ್ದಾರೆ. 
                                       ಡಾ ಮಮತಾ ರಾವ್ ಕೃತಿ ಬಿಡುಗಡೆ
                       ಡಾ. ಜಯಂತ್ ಕಾಯ್ಕಿಣಿ ತಮ್ಮ ಭಾಷಣದಲ್ಲಿ ಮಗ್ನರಾಗಿದ್ದಾರೆ.
              ಡಾ. ವ್ಯಾಸರಾವ್ ನಿಂಜುರ್ ಮಾತನಾಡುತ್ತಿದ್ದಾರೆ.
ಕಾರ್ಯಕ್ರದ ಕೊನೆಯಲ್ಲಿ ನಾರಾಯಣ ನವಿಲೇಕರ್ ವಂದನಾರ್ಪಣೆ ಮಾಡುತ್ತಿದ್ದಾರೆ. 

Link : http://www.daijiworld.com/news/news_disp.asp?n_id=376952

 


Comments

Popular posts from this blog

"ನೇಸರು ಜಾಗತಿಕ ಏಕಾಂಕ ನಾಟಕ ರಚನಾ ಸ್ಪರ್ಧೆ-2022ರ ಬಹುಮಾನ ವಿತರಣೆ ಹಾಗೂ ಕನ್ನಡ ನಾಟಕ- "ಚಿಟ್ಟೆ" ಪ್ರದರ್ಶನ !

ಮೈಸೂರು ಅಸೋಸಿಯೇಷನ್ ಮುಂಬಯಿನಲ್ಲಿ 'ಕನಕಜಯಂತ್ಯೋತ್ಸವ' !

Mysore association, Mumbai, Swarna Gauri & Ganesh pujotsav (2023) !