ಮುಂಬೈ ನಗರದ ಹಲವಾರು ಮಾಹಿತಿ ಸಂಗ್ರಹಗಳು ಈ ತಾಣದಲ್ಲಿವೆ. ಕಲೆ, ಸಾಹಿತ್ಯ, ನಾಟಕ, ಸಂಗೀತ, ನೃತ್ಯ, ಮತ್ತು ಸಿನೆಮಾ, ಮುಂತಾದ ಹಲವು ಕಲಾ-ಪ್ರಾಕಾರಗಳಿಗೆ ಮುಂಬೈ ತವರುಭೂಮಿ !
ನಾನು ಮುಂಬೈನಲ್ಲಿ ವಾಸವಾಗಿರುವಷ್ಟು ಸಮಯದಲ್ಲಿ ಬೆಂಗಳೂರಿನಲ್ಲಿ ನೋಡಿದ ಅಥವಾ ನೋಡಲಾಗದ ಅನೇಕ ಶ್ರೇಷ್ಠ ಕಲಾವಿದರನ್ನು ಇಲ್ಲಿ ನೋಡಿದ್ದೇನೆ ; ಕೇಳಿದ್ದೇನೆ ಸಹಿತ !
’ಹರಿ ಭಕ್ತಿ ಸಾರ ’- ಡಾ. ವಿದ್ಯಾಭೂಷಣ, ಬೆಂಗಳೂರು.
Get link
Facebook
Twitter
Pinterest
Email
Other Apps
-
ಗಾಯನ :
೨೦೧೦ ರ ನವೆಂಬರ್, ೨೭, ಶನಿವಾರದಂದು,
ನಾಟಕಗಳು :
ಬೆಂಗಳೂರಿನ ’ಅನೇಕ ನಾಟಕ ತಂಡ ”ದವರಿಂದ, "ಮಸ್ತಕಾಭಿಷೇಕ ರಿಹರ್ಸಲ್ಲು"
*"ನೇಸರು ಜಾಗತಿಕ ಏಕಾಂಕ ನಾಟಕ ರಚನಾ ಸ್ಪರ್ಧೆ-2022ರ ಬಹುಮಾನ ವಿತರಣೆ ಹಾಗೂ ಕನ್ನಡ ನಾಟಕ "ಚಿಟ್ಟೆ" ಪ್ರದರ್ಶನ* - *ಮೈಸೂರು ಅಸೋಸಿಯೇಷನ್, ಮುಂಬಯಿ* ವತಿಯಿಂದ ನಡೆದ 2022ನೇ ಸಾಲಿನ ನೇಸರು ಜಾಗತಿಕ ಏಕಾಂಕ ನಾಟಕ ರಚನಾ ಸ್ಪರ್ಧೆಯ ಬಹುಮಾನ ವಿತರಣೆ ಕಾರ್ಯಕ್ರಮವು ನಾಳೆ ( *28/05/2023*) *ಸಂಜೆ 6* ರಿಂದ *ಮೈಸೂರು ಅಸೋಸಿಯೇಷನ್ ಸಭಾಗೃಹದಲ್ಲಿ* ನಡೆಯಲಿದೆ. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಖ್ಯಾತ ರಂಗ ನಿರ್ದೇಶಕಿ, ರಂಗನಟಿ *ಅಹಲ್ಯಾ ಬಲ್ಲಾಳ್* ಭಾಗವಹಿಸಲಿದ್ದಾರೆ. ಮೈಸೂರು ಅಸೋಸಿಯೇಷನ್ ನ ಅಧ್ಯಕ್ಷೆ *ಕಮಲಾ ಕೆ.* ಅಧ್ಯಕ್ಷತೆ ವಹಿಸಲಿದ್ದಾರೆ. ಇದೇ ಸಂದರ್ಭದಲ್ಲಿ ಬೆಂಗಳೂರಿನ ಹೆಸರಾಂತ ಬಾಲಕಲಾವಿದ ಮಾಸ್ಟರ್ *ಗೋಕುಲ ಸಹೃದಯ* ಅವರಿಂದ *ಚಿಟ್ಟೆ* ಎಂಬ ವಿಶೇಷ ಏಕವ್ಯಕ್ತಿ ಕನ್ನಡ ನಾಟಕ ಪ್ರದರ್ಶನಗೊಳ್ಳಲಿದೆ. *"ಚಿಟ್ಟೆ"* ಎಂಬ ನಾಟಕವು ಭಾರತೀಯ ರಂಗಭೂಮಿಯಲ್ಲಿ ತುಂಬಾ ವಿಶಿಷ್ಟವಾದ ನಾಟಕ ಪ್ರಯೋಗವಾಗಿದೆ. *ಗೋಕುಲ ಸಹೃದಯ* ಎಂಬ ಬಾಲಕ ಬಾಲ್ಯದಿಂದಲೂ ರಂಗಭೂಮಿಯ ಕಲಾವಿದನಾಗಿದ್ದು ಹಲವು ಪಾತ್ರಗಳಲ್ಲಿ ಅಭಿನಯಿಸಿ ತನ್ನ ಹತ್ತನೇ ವಯಸ್ಸಿನಲ್ಲಿ ಒಂದು ಗಂಟೆ 10 ನಿಮಿಷಗಳ ಕಾಲ ಒಬ್ಬನೇ ಅಭಿನಯಿಸುವ ಏಕ ವ್ಯಕ್ತಿ ಪ್ರಯೋಗವನ್ನು ಇಡೀ ಭಾರತಾದ್ಯಂತ 84 ಪ್ರಯೋಗಗಳನ್ನು ಮಾಡಿದ್ದಾನೆ. ಭಾರತೀಯ ರಂಗಭೂಮಿಯ ಇತಿಹಾಸದಲ್ಲಿ ಇಷ್ಟು ಪುಟ್ಟ ಬಾಲಕ ಅತ್ಯಂತ ಸಮರ್ಥ ಅಭಿನಯದಿಂದ ಏಕವ್ಯಕ್ತಿ ರಂಗ ಪ್ರಯೋಗವನ್ನು ಮಾಡ
ಮೈಸೂರು ಅಸೋಸಿಯೇಷನ್ ಮುಂಬಯಿನಲ್ಲಿ 'ಕನಕಜಯಂತ್ಯೋತ್ಸವ'ವನ್ನು ಶನಿವಾರ, ೨೫, ನವೆಂಬರ್, ೨೦೨೩ ರ ಸಾಯಂಕಾಲ ವಿಜೃಂಭಣೆಯಿಂದ ನೆರವೇರಿಸಲಾಯಿತು ಆ ಸಂದರ್ಭದಲ್ಲಿ ೨೦೨೩ ರಲ್ಲಿ ಜರುಗಿದ ಸಂಗೀತ ಸ್ಪರ್ಧೆಯಲ್ಲಿ ವಿಜೇತರಾದ ಕಲಾವಿದರಿಗೆ ಬಹುಮಾನಗಳನ್ನು ವಿತರಿಸಲಾಯಿತು. ಮತ್ತು ಆ ಕಲಾವಿದರಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ ಕಾರ್ಯಕ್ರಮವನ್ನೂ ಆಯೋಜಿಸಲಾಗಿತ್ತು. ಮುಂಬಯಿಯ ಎಲ್ಲಾ ಜಿಲ್ಲೆಗಳಿಂದ ಸಂಗೀತ ಕಾರ್ಯಕ್ರಮದ ಆನಂದವನ್ನು ಸವಿಯಲು ಸ್ಪರ್ಧಾಳುಗಳ ಪೋಷಕರು ಹಾಗೂ ಮನೆಯವರಲ್ಲದೇ ಕನ್ನಡದ ಸಹೃದಯರೆಲ್ಲಾ ಆಗಮಿಸಿ ಕಾರ್ಯಕ್ರಮವನ್ನು ಚಂದಗಾಣಿಸಿಕೊಟ್ಟರು. ಶ್ರೀ ನಾರಾಯಣ ನವಿಲೇಕರ್ ಸಭೆಯನ್ನುದ್ದೇಶಿಸಿ ಮಾತಾಡುತ್ತಿರುವುದು . ಹಿರಿಯ ಸದಸ್ಯ ಶ್ರೀ. ಕೆ. ಮಂಜುನಾಥಯ್ಯನವರು ಸಭೆಯನ್ನುದ್ದೇಶಿಸಿ ಮಾತಾಡುತ್ತಿರುವುದು ಡಾ. ಬಿ. ಆರ್. ಮಂಜುನಾಥ ಸಭೆಯನ್ನುದ್ದೇಶಿಸಿ ಮಾತಾಡುತ್ತಿರುವುದು ಕಾರ್ಯಕ್ರಮ ಪ್ರಸ್ತುತಿಯನ್ನು ಸಂಗೀತ ವಿದುಷಿ, ಶ್ರೀಮತಿ ಶ್ಯಾಮಲಾ ರಾಧೇಶ್ ಮಾಡುತ್ತಿರುವುದು ಕಾರ್ಯಕ್ರಮದ ಮೊದಲು ಸಮಿತಿಯ ಸದಸ್ಯರೆಲ್ಲ ದೀಪ ಬೆಳಗಿಸಿ ಶುಭಾರಂಭಮಾಡಿದರು. ಮೈಸೂರು ಅಸೋಸಿಯೇಷನ್ ನ ಕಾರ್ಯದರ್ಶಿ ಡಾ . ಗಣಪತಿ ಶಂಕರಲಿಂಗ ದೀಪ ಬೆಳಗಿಸುತ್ತಿರುವುದು ಕಾರ್ಯಕ್ರಮವನ್ನು ವೀಕ್ಷಿಸಲು ಬಂದ ಸಭಿಕರು ಸಂಗೀತ ಸ್ಪರ್ಧೆಯಲ್ಲಿ ವಿಜೇತರಾದವರು : ಪ್ರಥಮ ಪ್
ಮೈಸೂರು ಅಸೋಸಿಯೇಶನ್ ಮಾತುಂಗ ಮುಂಬಯಿನಲ್ಲಿ ವರ್ಷ ೨೦೨೩ ರ ಸೆಪ್ಟೆಂಬರ್, ೧೮, ರಿಂದ ೨೪, ಸೆಪ್ಟೆಂಬರ್ ೨೦೨೩ ರ ವರೆಗೆ ಸ್ವರ್ಣ ಗೌರಿ ಹಾಗೂ ಶ್ರೀ ಮಹಾಗಣಪತಿ ಪೂಜಾ ಮಹೋತ್ಸವವನ್ನು ಅತ್ಯಂತ ವಿಜೃಂಭಣೆ ಹಾಗೂ ವಿಧಿ ವಿಧಾನಗಳಿಂದ ನೆರೆವೇರಿಸಲಾಯಿತು. https://youtu.be/sCTzVvc-Thw?si=ZCJUSwc6RCbQ7ADP ಪ್ರತಿವರ್ಷದಂತೆ ಈ ವರ್ಷವೂ ಮುಂಬಯಿ ಮಹಾನಗರದ ಮೈಸೂರು ಅಸೋಸಿಯೇಷನ್ ನಲ್ಲಿ ಸ್ವರ್ಣ ಗೌರಿಯನ್ನು ೧೮, ಸೋಮವಾರ, ಸೆಪ್ಟೆಂಬರ್, ೨೦೨೩ ರಂದು ಪ್ರತಿಷ್ಠಾಪಿಸಲಾಯಿತು. ಮಹಾಗಣಪತಿಯನ್ನು ೧೯, ಮಂಗಳವಾರ ಸೆಪ್ಟೆಂಬರ್, ೨೦೨೩ ರಂದು ಪ್ರತಿಷ್ಠಾಪಿಸಲಾಯಿತು. ಪ್ರತಿದಿನವೂ ಮಹಾಗಣಪತಿ ಮತ್ತು ಸ್ವರ್ಣಗೌರಿಗೆ ಪೂಜೆಗಳನ್ನು ವಿಧಿವತ್ತಾಗಿ ನೆರೆವೇರಿಸಲಾಗುತ್ತಿದೆ. ೨೨ ಶುಕ್ರವಾರದಂದು ಅಸೋಸಿಯೇಶನ್ ನಲ್ಲಿ ಮಹಿಳೆಯರಿಗೆ ಅರಿಶಿನ-ಕುಂಕುಮ ಕಾರ್ಯಕ್ರಮದಲ್ಲಿ ಬಹಳಷ್ಟು ಮಹಿಳೆಯರು ಭಾಗವಹಿಸಿ ಕಾರ್ಯಕ್ರಮವನ್ನು ಚಂದಗಾಣಿಸಿದರು. ೨೪, ರವಿವಾರ, ಸೆಪ್ಟೆಂಬರ್ ೨೦೨೩ ರಂದು ಬೆಳಿಗ್ಯೆ ಅರ್ಚನೆ, ಗಣಪತಿಗೆ ಭಜನೆ, ನೃತ್ಯ ಮೊದಲಾದ ಪೂಜಾವಿಧಾನಗಳ ನಂತರ ಮಹಾ ಮಂಗಳಾರತಿಯ ನಂತರ ಗಣಪತಿ ಮತ್ತು ಸ್ವರ್ಣ ಗೌರಿಮೂರ್ತಿಗಳನ್ನು ಮುಂಬಯಿಯ ದಾದರ್ ಸಮುದ್ರ ಬೀಚ್ ನಲ್ಲಿ ವಿಸರ್ಜಿಸಲಾಯಿತು. ತದನಂತರ ಪ್ರಸಾದ ವಿನಿಯೋಗ, ಮೊದಲಾದ ಕಾರ್ಯಕ್ರಮಗಳಿಂದ ಕಾರ್ಯಕ್ರಮ ಸಂಪನ್ನ ಗೊಂಡಿತು. ಮೈಸೂರು ಅಸೋಸಿಯೇಷನ್ ನ ಸದಸ್ಯರೆಲ್ಲ ಹೆಚ್ಚಿನ ಸಂಖ್ಯೆಯಲ್ಲಿ
Comments