Posts

Showing posts from October, 2023

ಕನ್ನಡ ಕಲಾಕೇಂದ್ರ ಮುಂಬಯಿನ ೬೪ ನೇ ನಾಟಕೋತ್ಸವ !

Image
ಕಾರ್ಯಕ್ರಮ ಸೂಚಿ : (ಕರ್ನಾಟಕ ಮಲ್ಲ ದಿನ ಪತ್ರಿಕೆ) ಕನ್ನಡ  ಕಲಾಕೇಂದ್ರ ಮುಂಬಯಿನ  ೬೪ ನೇ ನಾಟಕೋತ್ಸವ,  ಮೈಸೂರು ಅಸೋಸಿಯೇಷನ್ ಮುಂಬಯಿನ  ಸಭಾಗೃಹದಲ್ಲಿ ಜರುಗಿತು. ತಾರೀಖು : ೨೮, ಶನಿವಾರ, ಅಕ್ಟೊಬರ್, ೨೦೨೩,  ಮುಂಬಯಿಯ "ಕರ್ನಾಟಕ ಮಲ್ಲ" ಕನ್ನಡ ದೈನಿಕ ಪತ್ರಿಕೆ ವರದಿ : "ಪ್ರೇಕ್ಷಕ ವರ್ಗ ಬೆಳೆದಾಗ ಕನ್ನಡ ರಂಗಭೂಮಿಯ ಉಳಿವು" - ಕೆ. ಮಂಜುನಾಥಯ್ಯ (ಮುಂಬಯಿ ನಗರದ  ಮೈಸೂರು ಅಸೋಸಿಯೇಷನ್  ನ ಲಲಿತಕಲಾ ವಿಭಾಗದ ಹಿರಿಯ ಕಲಾವಿದರಲ್ಲೊಬ್ಬರು)

ಮುಂಬಯಿನ ಸಾಂತಾಕ್ರೂಜ್ ಜಿಲ್ಲೆಯಲ್ಲಿರುವ ಶ್ರೀ. ವಿಶ್ವೇಶ್ವರ ತೀರ್ಥ ಸಭಾಗೃಹದಲ್ಲಿ ಶ್ರೀ. ಪುತ್ತೂರು ನರಸಿಂಹ ನಾಯಕ್ ರವರ "ಭಕ್ತಿ ಸಂಗೀತ ಕಾರ್ಯಕ್ರಮ" ವನ್ನು ಆಯೋಜಿಸಲಾಗಿತ್ತು !

Image
ಮುಂಬಯಿನ ಸಾಂತಾಕ್ರೂಜ್ ಜಿಲ್ಲೆಯಲ್ಲಿರುವ  ಶ್ರೀ. ವಿಶ್ವೇಶ್ವರ ತೀರ್ಥ ಸಭಾಗೃಹದಲ್ಲಿ ಶ್ರೀ. ಪುತ್ತೂರು ನರಸಿಂಹ ನಾಯಕ್ ರವರ ಭಕ್ತಿ ಸಂಗೀತ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.  ಭಕ್ತರು ಹೆಚ್ಚು ಸಂಖ್ಯೆಯಲ್ಲಿ ಆಗಮಿಸಿ ಸಂಗೀತ ಸುಧೆಯನ್ನು ಸವಿದರು.  ತಾರೀಖು : ೨೧, ಅಕ್ಟೊಬರ್ , ೨೦೨೩.  ಸಮಯ : ಸಾಯಂಕಾಲ ೬-೩೦ ರಿಂದ ೮-೩೦ ರ ವರೆಗೆ  'ಕ ರ್ನಾಟಕ ಮಲ್ಲ ಪತ್ರಿಕೆ ,' ೨೦, ಶುಕ್ರವಾರ ಅಕ್ಟೊಬರ್, ೨೦೨೩ ಕೊಂಡಿ :   https://photos.google.com/share/AF1QipNF3HJ84_kuBNoxYQLAUi8nt2bdxpeSgprXyJSCi6pn-KoPkExKk-Ga8AzojOWQxg?key=ZEY5cFcwYUdBQjlZREZvaGdBbm1uZ3FCekFKeWxR ಪ್ರಫುಲ್ಲ ಎಸ್ ಕೆ. ಉರ್ವಲ್ ಹಾಗೂ ಬಿ. ಆರ್. ಶೆಟ್ಟಿ ಕುಟುಂಬದವರಿಗೆ ಧನ್ಯವಾದಗಳು 

ಭುವನದ ಭಾಗ್ಯವೆಂದು ಕರೆದು, ಕೊಂಡಾಡಿದ ಮುಂಬಯಿ ಕನ್ನಡಿಗರು !

ಶತಾವಧಾನಿ  ಡಾ.  ಆರ್. ಗಣೇಶರ ವಿದ್ವತ್ಪೂರ್ಣ ಉಪನ್ಯಾಸವನ್ನು ನೋಡಿ ಆಲಿಸಿದ  ಮುಂಬಯಿನ ಕನ್ನಡಿಗರು ಉದ್ಗರಿಸಿದ್ದು ಹೀಗೆ  ! ನಾವೆಲ್ಲಾ ಮುಂಬಯಿ ವಿಶ್ವವಿದ್ಯಾಲಯದ ಕನ್ನಡ ವಿಭಾಗದ ರೂವಾರಿ ಡಾ. ಜಿ. ಏನ್. ಉಪಾಧ್ಯ ಮತ್ತು ಸಕ್ರಿಯ ನಗುಮುಖದ ಕಾರ್ಯಕರ್ತ/ತೆಯರ ಮತ್ತು ಮಿತ್ರವೃಂದ ಮುಲುಂಡ್ ರವರ ಸಹಭಾಗಿತ್ವದ  ಪಾಲುಗಾರಿಕೆಯಲ್ಲಿ ಉಪನ್ಯಾಸದ ಸವಿಯನ್ನು ಕಂಡುಕೊಳ್ಳುತ್ತಿದ್ದೇವೆ.                                                      ವಿಡಿಯೋ ಕೊಂಡಿ  :    https://youtu.be/m4nsLrgxWsc?si=OiiRjrOiHJ_cy21t

ಮುಂಬಯಿಯ ಶ್ರೀನಿವಾಸ ಜೋಕಟ್ಟೆಯವರ , "ದೇವರುಗಳ ನ್ಯಾಯಾಲಯ", ಮತ್ತು "ಎಲ್ಲಿಗೋ ಪಯಣ ಯಾವುದೋ ದಾರಿ" ! ಕ್ರಮವಾಗಿ ೪೦ ಹಾಗೂ ೪೧ ನೆಯ ಕೃತಿಗಳ ಲೋಕಾರ್ಪಣೆ !

Image
ಮುಂಬಯಿಯ ಖ್ಯಾತ ಸಾಹಿತಿ,  ಅಂಕಣಕಾರ, ಉಪಸಂಪಾದಕ, ಶ್ರೀನಿವಾಸ ಜೋಕಟ್ಟೆಯವರ  ವಿರಚಿತ, "ದೇವರುಗಳ ನ್ಯಾಯಾಲಯ", ಮತ್ತು "ಎಲ್ಲಿಗೋ ಪಯಣ ಯಾವುದೋ  ದಾರಿ"  ! ಕ್ರಮವಾಗಿ ೪೦ ಹಾಗೂ ೪೧ ನೆಯ ಕೃತಿಗಳ ಲೋಕಾರ್ಪಣೆ  ! ಸ್ಥಳ : ಮೈಸೂರು ಅಸೋಸಿಯೇಷನ್, ಸಭಾಗೃಹದಲ್ಲಿ, ಮಾತುಂಗ ಮುಂಬೈ-೪೦೦೦ ೧೯ ತಾರೀಖು ಮತ್ತು ಸಮಯ : ೮, ರವಿವಾರ, ಅಕ್ಟೊಬರ್, ೨೦೨೩, ಮಧ್ಯಾನ್ಹ ೨ ಗಂಟೆಗೆ  ಕ'ರ್ನಾಟಕ ಮಲ್ಲ ದಿನಪತ್ರಿಕೆಯ ವರದಿ' : ಸಮಾರಂಭದ ಅಧ್ಯಕ್ಷರಾಗಿ ಬಿ. ಎಸ್. ಕೆ. ಬಿ. ಅಸೋಸಿಯೇಷನ್ ಅಧ್ಯಕ್ಷ ಡಾ. ಸುರೇಶ ರಾವ್ ತಮ್ಮ ಭಾಷಣದಲ್ಲಿ ಶ್ರೀ. ಶ್ರೀನಿವಾಸ ಜೋಕಟ್ಟೆಯವರ ಕ್ರಿಯಾಶೀಲತೆಯನ್ನು ಕಂಡು ಅವರಿಗೆ ಡಾ. ವ್ಯಾಸರಾಯ ನಿಂಜೂರ್ ರವರ ನಿವೃತ್ತಿಯ ನಂತರ,  ಬಿ. ಎಸ್ ಕೆ. ಬಿ ಅಸೋಸಿಯೇಷನ್ ನ 'ಗೋಕುಲ ವಾಣಿ'ಪತ್ರಿಕೆಯ ಸಂಪಾದಕತ್ವವನ್ನು ಕಳೆದ ವರ್ಷ ನೀಡಿದ್ದು ಈಗ ಆವರು ಯಶಸ್ವಿಯಾಗಿ ನಿರ್ವಹಿಸುತ್ತಿರುವುದನ್ನು ಉಲ್ಲೇಖಿಸಿದರು. "ಸಮಾಜದಲ್ಲಿ ಯಾರು ಪರಮಾತ್ಮನಿಗೆ ಬೇಕಾದಂತಹ ಒಳ್ಳೆಯ ಕೆಲಸಗಳನ್ನು ಮಾಡುತ್ತಾರೋ ಅವರೇ ಭಾಗ್ಯಶಾಲಿಗಳು ; ಒಳ್ಳೆಯ ಕೆಲಸಗಳನ್ನು ಭಕ್ತಿ-ಶ್ರದ್ಧಾಸಕ್ತಿಗಳಿಂದ ಮಾಡುತ್ತಿದ್ದರೆ ಅವು ಸಾರ್ಥಕತೆಯನ್ನು ಪಡೆಯುತ್ತವೆ. ನಾವೆಲ್ಲಾ ಚಿಂತನೆಗಳನ್ನು ಒಳ್ಳೆಯ ಕೆಲಸಗಳಿಗೆ ವಿನಿಯೋಗಿಸುತ್ತಿದ್ದರೆ ದೇವರ ಅನುಗ್ರಹ ದೊರೆಯುವುದರಲ್ಲಿ ಸಂಶಯವಿಲ್ಲ" ವೆಂದು ನುಡಿದರು.    ಪ್ರೇಮ ತತ್ವ