Shri Subraya chokkadi, spoke at the kannada division of Mumbai university Kalina campus, Mumbai !

ಶ್ರೀ ಸುಬ್ರಾಯ ಚೊಕ್ಕಾಡಿಯವರ ಉಪಸ್ಥಿತಿ ; ಮುಂಬಯಿ ವಿಶ್ವವಿದ್ಯಾಲಯದ ಕನ್ನಡ ವಿಭಾಗದಲ್ಲಿ  !


ಶ್ರೀ. ಸುಬ್ರಾಯ ಚೊಕ್ಕಾಡಿಯವರು ಮುಂಬಯಿ  ವಿಶ್ವವಿದ್ಯಾಲಯದ ಕನ್ನಡ ವಿಭಾಗದಲ್ಲಿ ಹಮ್ಮಿಕೊಂಡ "ಕಾವ್ಯ ಸಂವಾದ ಕಾರ್ಯಕ್ರಮ"ದಲ್ಲಿ ಆಹ್ವಾನಿತರಾಗಿದ್ದರು. ಕನ್ನಡ ವಿಭಾಗದ  ಮುಖ್ಯಸ್ಥ ಡಾ. ಜಿ. ಏನ್. ಉಪಾಧ್ಯ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿಕೊಂಡಿದ್ದರು. ಅವರು ತಮ್ಮ ವಿಚಾರವನ್ನು ಮಂಡಿಸುತ್ತಾ  'ಯುವ ಕವಿಗಳು ಕವಿತೆ  ಬರೆಯುವುದನ್ನು ಲಘುವಾಗಿ ಪರಿಗಣಿಸಬಾರದು. ಛಂದಸ್ಸು ಬಹಳ ಮುಖ್ಯ. ಇಂದಿನ ಯುಗದಲ್ಲಿ ಲಯಕ್ಕೆ ಹೆಚ್ಚು ಮಹತ್ವ ಕೊಡುತ್ತಿಲ್ಲ. ಅದು ಸಲ್ಲದು 'ಎಂದು ನುಡಿದರು.  ಮುಂದುವರೆಯುತ್ತಾ  "ಯುವ ಕವಿಗಳ ಎಲ್ಲ ಧ್ವನಿಯಲ್ಲೂ ಲಯ ಇದ್ದೇ ಇರುತ್ತದೆ. ಸಾಮಾನ್ಯವಾಗಿ ಖುಷಿಗಿಂತ ನೋವಿನಲ್ಲೇ ಅತ್ಯಂತ ಪರಿಣಾಮಕಾರಿಯಾದ ಕವಿತೆಗಳು ಅರಳಿವೆ ಎನ್ನುವುದು ತಮ್ಮ ಅನಿಸಿಕೆ" ಎಂದು ಹೇಳಿದರು 

ಶ್ರೀ. ಸುಬ್ರಾಯ ಚೊಕ್ಕಾಡಿಯವರ ಹೆಚ್ಚುಗಾರಿಕೆ ಇರುವುದು, ನವ್ಯ ಕಾವ್ಯ ಪರಂಪರೆಯನ್ನು ಆಲಿಂಗಿಸಿದರೂ ತಮ್ಮತನ, ಮತ್ತು ತಮ್ಮದೇ ಆದ ವರ್ಚಸ್ಸನ್ನು ಬೆಳೆಸಿಕೊಂಡು ಕಾಯ್ದಿಟ್ಟುಕೊಂಡಿದ್ದು. ಹೀಗೆ ಮುಂದುವರೆದ ಅವರು ಡಾ. ಜಿ. ಎಸ್.ಎಸ್, ಡಾ. ನಿಸಾರ್ ಅಹ್ಮದ್, ಡಾ. ಎಚ್ಚೆಸ್ವಿ , ನಾಡೋಜ ಚನ್ನವೀರ ಕಣವಿ, ಮೊದಲಾದವರ  ಸಾಲಿನಲ್ಲಿ ಕಾಣಿಸಿಕೊಳ್ಳುತ್ತಾರೆ. 

ಅವರ ಬಾಲ್ಯ ಹಾಗೂ ಜೀವನದ ಬಗ್ಗೆ ಒಂದು ನೋಟ :

ಸುಬ್ರಾಯ ಚೊಕ್ಕಾಡಿಯವರು  (ಜೂನ್ ೨೯, ೧೯೪೦) ಶಿಕ್ಷಕ,  ಕವಿ, ವಿಮರ್ಶಕ, ನಾಟಕಕಾರ, ಸುಳ್ಯ ತಾಲೂಕಿನ ಚೊಕ್ಕಾಡಿಯಲ್ಲಿ ಜನಿಸಿದರು. ಯಕ್ಷಗಾನ ಭಾಗವತರಾಗಿ ಹೆಸರುಗಳಿಸಿದ್ದ  ಗಣಪಯ್ಯನವರು ಇವರ ತಂದೆ. ತಾಯಿ ಸುಬ್ಬಮ್ಮ, ಪ್ರಾಥಮಿಕ ವಿದ್ಯಾಭ್ಯಾಸಗಳಿಸಿದ್ದು  ಹುಟ್ಟಿದೂರಿನಲ್ಲೇ.  ಹೈಸ್ಕೂಲು ವಿದ್ಯಾಭ್ಯಾಸ ಪಂಜದಲ್ಲಿ. ಮುಂದೆ  ಕನ್ನಡದಲ್ಲಿ ಎಂ. ಎ ಪದವಿಗಳಿಸಿದ್ದು ಮೈಸೂರು ವಿ. ವಿ. ನಿಲಯದ ಅಂಚೆ ತೆರಪಿನ ಶಿಕ್ಷಣ ಸಂಸ್ಥೆಯ ನೆರವಿನಿಂದ. ಶಿಕ್ಷಕನಾಗಿ ಸೇವೆಸಲ್ಲಿಸುವುದು ಅವರ ಕನಸುಗಳಲ್ಲೊಂದು. ಅದರಲ್ಲೇ ತೃಪ್ತಿಹೊಂದಿ ೩೯ ವರ್ಷ ದುಡಿದು,  ಮುಖ್ಯೋಪಾಧ್ಯಾಯರಾಗಿ ನಿವೃತ್ತರಾದರು. ಸುಬ್ರಾಯ ಅವರಿಗೆ  ಕವನ ಬರೆಯುವ ಗೀಳು ಬಾಲ್ಯದಿಂದ ಬಂದಿದ್ದು ; ಅದು  ತಮ್ಮ  ತಂದೆಯವರ ಕೊಡುಗೆ ಎಂದೇ ಅವರು ಭಾವಿಸುತ್ತಾರೆ. ಸುಬ್ರಾಯ ಚೊಕ್ಕಾಡಿಯವರ  ಕವಿತೆಗಳನ್ನು ಪಟ್ಟಿಮಾಡಿದರೆ :  ಅವು :  ತೆರೆ, ಬೆಟ್ಟವೇರಿದ ಮೇಲೆ, ನಿಮ್ಮವೂ ಇರಬಹುದು, ಮೊನ್ನೆ ಸಿಕ್ಕವರು, ಇದರಲ್ಲಿ ಅದು, ಇನ್ನೊಂದು ಬೆಳಗು, ಮಾಗಿಯ ಕೋಗಿಲೆ. ಗೀತೆಗಳು-ಹಾಡಿನ ಲೋಕ, ಬಂಗಾರದ ಹಕ್ಕಿ ಪ್ರಮುಖವಾದವುಗಳು.


ವಿಮರ್ಶೆಗಳಲ್ಲಿಯೂ  ಸಾಕಷ್ಟು ಕೈಯಾಡಿಸಿದ್ದಾರೆ ; ಅವುಗಳು ಹೀಗಿವೆ :


ಕಾವ್ಯ ಸಮೀಕ್ಷೆ, ಕೃತಿಶೋಧ, ಒಳಹೊರಗು ಮತ್ತು ಕಾದಂಬರಿಯಾಗಿ ಸಂತೆಮನೆ ಹೆಸರುಗಳಿಸಿವೆ. 
ಬೇರೆಕವಿಗಳ ಜತೆ ಸೇರಿ  ಸಂಪಾದಿತ ಕೃತಿಗಳು  : ೧೯೦೧ರಿಂದ ೧೯೭೬ರವರೆಗೆ ದಕ್ಷಿಣ ಕನ್ನಡ ಕಾವ್ಯ. 
ಸುಬ್ರಾಯರವರ ಬರಹಗಳ ಆಧಾರಿತ ಕ್ಯಾಸೆಟ್ ಹಾಗೂ ಸಿಡಿಗಳು ಹೊರಬಂದಿವೆ.  
ಮಿಲನ, ಮಾನಸ, ಬೆಣ್ಣೆ ಕದ್ದ ನಮ್ಮ ಕೃಷ್ಣ, ವನಸಿರಿ, ಅನುರಾಗ, ಸಲ್ಲಾಪ, ಹುಣ್ಣಿಮೆ, ನೂಪುರ, ಸಿರಿಗನ್ನಡ, ದೀಪ, ಭಾವ ಚಿತ್ತಾರ, ನಿನ್ನ ಬಾಂದಳದಂತೆ ಜನಮನ್ನಣೆಯನ್ನು ಗಳಿಸಿವೆ. 

ಚೊಕ್ಕಾಡಿಯವರಿಗೆ ದೊರೆತ  ಗೌರವ ಪ್ರಶಸ್ತಿಗಳು  :

* ೬೫ನೇ ಕನ್ನಡ ಸಾಹಿತ್ಯ ಸಮ್ಮೇಳನದ ಕವಿಗೋಷ್ಠಿಯ ಅಧ್ಯಕ್ಷತೆ, 
* ವರ್ಧಮಾನ ಪ್ರಶಸ್ತಿ, ಮುದ್ದಣ ಪ್ರಶಸ್ತಿ,
* ಮೃತ್ಯುಂಜಯ ಸಾರಂಗ ಮಠ ಪ್ರಶಸ್ತಿ,
* ಸಾಹಿತ್ಯ ಕಲಾನಿ ಪ್ರಶಸ್ತಿ,
* ಕರ್ನಾಟಕ ಶ್ರೀ ಪ್ರಶಸ್ತಿ ಮೊದಲಾದವುಗಳು 
* ಸುಳ್ಯ ತಾಲ್ಲೂಕು ೫ ನೇ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ, 
* ದಕ್ಷಿಣ ಕನ್ನಡ ಜಿಲ್ಲಾ ೧೫ ನೇ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ,

* ಅವರ ಸಾಹಿತ್ಯ ಪ್ರೇಮಿಗಳೆಲ್ಲಾ ಸೇರಿ ಅರ್ಪಿಸಿದ ಗೌರವ ಗ್ರಂಥ  : 'ಮುಕ್ತ ಹಂಸ' 


ಸೌಜನ್ಯತೆ -ಕನ್ನಡ ವಿಕಿಪೀಡಿಯ 


ಮುಂಬೈ ವಿಶ್ವವಿದ್ಯಾಲಯದ ಕನ್ನಡ ವಿಭಾಗದಿಂದ  ಪದ್ಮ ಭೂಷಣ  ಪುರಸ್ಕೃತ, ಡಾ. ಎಸ್. ಎಲ್. ಭೈರಪ್ಪನವರಿಗೆ ಗ್ರಂಥ ಗೌರವ ಸಮರ್ಪಣೆ  !

ಮುಂಬೈ ವಿಶ್ವವಿದ್ಯಾಲಯದ ಕನ್ನಡ ವಿಭಾಗದಿಂದ  ಪದ್ಮಭೂಷಣ  ಪುರಸ್ಕೃತ, ಡಾ. ಎಸ್. ಎಲ್. ಭೈರಪ್ಪನವರಿಗೆ ಗ್ರಂಥ ಗೌರವ ಸಮರ್ಪಣೆ  : ೨೧, ಶುಕ್ರವಾರ ಜುಲೈ ೨೦೨೩ ರ ಮಧ್ಯಾನ್ಹದಂದು !



'ಮುಂಬಯಿಯ ಕನ್ನಡ ದಿನಪತ್ರಿಕೆ ಕರ್ನಾಟಕ ಮಲ್ಲ', ತನ್ನ ೩೦ ನೇ ತಾರೀಖಿನ ದಿನದಂದು ಮಾಡಿದ ವರದಿ :

ಸ್ಥಳ :
 
ಮುಂಬೈ ವಿಶ್ವವಿದ್ಯಾಲಯ, ಕಲಿನಾ ಕ್ಯಾಂಪಸ್ ನಲ್ಲಿರುವ ಜೆ. ಪಿ. ನಾಯಕ್ ಸಭಾಭವನದಲ್ಲಿ  ಡಾ. ಎಸ್ ಎಲ್ ಭೈರಪ್ಪನವರು ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದು ಮಾತಾಡಿದರು. 

ವಿಶ್ವವಿದ್ಯಾಲಯ ವಿಶ್ವಮಾನ್ಯರಾದ  ಭೈರಪ್ಪನವರಿಗೆ "ಭಾಷೆಗಳ ಗಡಿ ಗೆದ್ದ ಭಾರತೀಯ" ಎಂಬ ಗೌರವ ಗ್ರಂಥವನ್ನು ಪ್ರಕಟಿಸಿದ್ದು,  ಸಮರ್ಪಿಸಿದರು. ಭೈರಪ್ಪನವರ ಮೇರು ವ್ಯಕ್ತಿತ್ವಕ್ಕೆ ಮಾರುಹೋಗಿ ಕನ್ನಡ ಸಾಹಿತ್ಯಕ್ಕೆ ಅವರ ಕೊಡುಗೆಯನ್ನು ಆರಾಧಿಸಿ ಅನೇಕ ಸಾಹಿತ್ಯಾಭಿಮಾನಿಗಳು ತಮ್ಮ ಅನಿಸಿಕೆಗಳ ರೂಪದಲ್ಲಿ ಹೊರತಂದಿರುವ ಗ್ರಂಥವೇ"ಭಾಷೆಗಳ ಗಡಿ ಗೆದ್ದ ಭಾರತೀಯ" ! ಇದು ಮುಂಬಯಿ ವಿ. ವಿ. ದ ಕನ್ನಡ ವಿಭಾಗದಲ್ಲಿ  ಅರಳಿರುವ ೯೨ ನೆಯ ಕುಸುಮವಾಗಿದೆ. 

ಹೆಚ್ಚಾಗಿ ಈ ಹೊತ್ತಿಗೆಯಲ್ಲಿ ಬರೆದ ಲೇಖಕ ವರ್ಗವೆಲ್ಲ ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಸದಸ್ಯರು. ಗ್ರಂಥವು ಸುದೀರ್ಘ ಸಂದರ್ಶನವನ್ನು ಒಳಗೊಂಡಿದೆ. ಕನ್ನಡ ವಿಭಾಗದ ಸಂದರ್ಶನ ಪ್ರಾಧ್ಯಾಪಕಿ, ಹಾಗೂ ಭೈರಪ್ಪನವರನ್ನು ತೀರಾ ಹತ್ತಿರದಿಂದ  ಬಲ್ಲ,  ಡಾ. ಉಮಾರಾವ್ ಸಂಪಾದನೆಯ ಕೆಲಸಮಾಡಿದ್ದಾರೆ.   ವಿಭಾಗದ ಡಾ. ವಿಶ್ವನಾಥ ಕಾರ್ನಾಡ್, ಡಾ. ಪೂರ್ಣಿಮಾ ಶೆಟ್ಟಿ,  ಡಾ. ಮಮತಾ ರಾವ್, ಡಾ. ರಮಾ ಉಡುಪ, ಕಲಾ ಭಾಗವತ್, ಗೀತಾ ಮಂಜುನಾಥ್,  ಜಯ ಸಾಲಿಯಾನ್, ಅನಿತಾ ಪೂಜಾರಿ, ನಳಿನಾ ಪ್ರಸಾದ್, ಶಶಿಕಲಾ ಹೆಗಡೆ, ವಿಕ್ರಂ ಜೋಶಿ, ಶಾಂತಲಾ ಹೆಗಡೆ, ನಿವೇದಿತಾ, ಮೊದಲಾದವರ  ಭೈರಪ್ಪನವರ ಕೃತಿಗಳನ್ನು ಕುರಿತ  ಪ್ರಾಮಾಣಿಕ  ಬರಹಗಳಿವೆ. 

ಮುಂಬಯಿನ ದೈನಿಕ ಕರ್ನಾಟಕ ಮಲ್ಲ ಪತ್ರಿಕೆ ೨೫, ಮಂಗಳವಾರ, ಜುಲೈ, ೨೦೨೩ ರ ಪತ್ರಿಕೆ  ಮುಂಬಯಿ ವಿಶ್ವವಿದ್ಯಾಲಯದ ಕನ್ನಡ ವಿಭಾಗದಲ್ಲಿ ನಡೆದ ಕಾರ್ಯಕ್ರಮಗಳನ್ನು ಹೀಗೆ ವರದಿಮಾಡಿದೆ. 


         ಶ್ರೀಮತಿ  ಅನೀತಾ ಪೂಜಾರಿ, ಮತ್ತು ಕಲಾಭಾಗ್ವತ್ ನಮ್ಮೆಲ್ಲರ ಪ್ರೀತಿ ಮತ್ತು ಅಭಿನಂದನೆಗಳಿಗೆ ಪಾತ್ರರು.  

-ಮುಂಬಯಿ ಕನ್ನಡಿಗರೆಲ್ಲ ಈ ಕಾರ್ಯಕ್ರಮವನ್ನು ಪ್ರೀತಿಯಿಂದ ಸ್ವಾಗತಿಸುತ್ತೇವೆ. 
ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಪ್ರಾಧ್ಯಾಪಕರೂ ಮುಖ್ಯಸ್ಥರೂ ಆಗಿರುವ  ಡಾ. ಗಣೇಶ್ ಜಿ. ಉಪಾಧ್ಯರನ್ನು ವಂದಿಸುತ್ತೇವೆ. 



Comments

We are so happy that Dr. S.L.Bhairappaji, has come all the way from Bengaluru and blessed the Kannada writers of Mumbai ! This shows his love for Kannada language in spite of his advanced age related inconveniences !
It is easy to take the extracts from Karnataka malla, but not with Udayawani, which is not user's friendly, as for as my work is concerned.

Popular posts from this blog

ಮೈಸೂರು ಅಸೋಸಿಯೇಷನ್ ಮುಂಬಯಿನಲ್ಲಿ 'ಕನಕಜಯಂತ್ಯೋತ್ಸವ' !

Mysore association, Mumbai, Swarna Gauri & Ganesh pujotsav (2023) !