ಮುಂಬೈ ನಗರದ ಹಲವಾರು ಮಾಹಿತಿ ಸಂಗ್ರಹಗಳು ಈ ತಾಣದಲ್ಲಿವೆ. ಕಲೆ, ಸಾಹಿತ್ಯ, ನಾಟಕ, ಸಂಗೀತ, ನೃತ್ಯ, ಮತ್ತು ಸಿನೆಮಾ, ಮುಂತಾದ ಹಲವು ಕಲಾ-ಪ್ರಾಕಾರಗಳಿಗೆ ಮುಂಬೈ ತವರುಭೂಮಿ !
ನಾನು ಮುಂಬೈನಲ್ಲಿ ವಾಸವಾಗಿರುವಷ್ಟು ಸಮಯದಲ್ಲಿ ಬೆಂಗಳೂರಿನಲ್ಲಿ ನೋಡಿದ ಅಥವಾ ನೋಡಲಾಗದ ಅನೇಕ ಶ್ರೇಷ್ಠ ಕಲಾವಿದರನ್ನು ಇಲ್ಲಿ ನೋಡಿದ್ದೇನೆ ; ಕೇಳಿದ್ದೇನೆ ಸಹಿತ !
’ಹರಿ ಭಕ್ತಿ ಸಾರ ’- ಡಾ. ವಿದ್ಯಾಭೂಷಣ, ಬೆಂಗಳೂರು.
Get link
Facebook
Twitter
Pinterest
Email
Other Apps
-
ಗಾಯನ :
೨೦೧೦ ರ ನವೆಂಬರ್, ೨೭, ಶನಿವಾರದಂದು,
ನಾಟಕಗಳು :
ಬೆಂಗಳೂರಿನ ’ಅನೇಕ ನಾಟಕ ತಂಡ ”ದವರಿಂದ, "ಮಸ್ತಕಾಭಿಷೇಕ ರಿಹರ್ಸಲ್ಲು"
ಮೈಸೂರು ಅಸೋಸಿಯೇಷನ್ ಮುಂಬಯಿನಲ್ಲಿ 'ಕನಕಜಯಂತ್ಯೋತ್ಸವ'ವನ್ನು ಶನಿವಾರ, ೨೫, ನವೆಂಬರ್, ೨೦೨೩ ರ ಸಾಯಂಕಾಲ ವಿಜೃಂಭಣೆಯಿಂದ ನೆರವೇರಿಸಲಾಯಿತು ಆ ಸಂದರ್ಭದಲ್ಲಿ ೨೦೨೩ ರಲ್ಲಿ ಜರುಗಿದ ಸಂಗೀತ ಸ್ಪರ್ಧೆಯಲ್ಲಿ ವಿಜೇತರಾದ ಕಲಾವಿದರಿಗೆ ಬಹುಮಾನಗಳನ್ನು ವಿತರಿಸಲಾಯಿತು. ಮತ್ತು ಆ ಕಲಾವಿದರಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ ಕಾರ್ಯಕ್ರಮವನ್ನೂ ಆಯೋಜಿಸಲಾಗಿತ್ತು. ಮುಂಬಯಿಯ ಎಲ್ಲಾ ಜಿಲ್ಲೆಗಳಿಂದ ಸಂಗೀತ ಕಾರ್ಯಕ್ರಮದ ಆನಂದವನ್ನು ಸವಿಯಲು ಸ್ಪರ್ಧಾಳುಗಳ ಪೋಷಕರು ಹಾಗೂ ಮನೆಯವರಲ್ಲದೇ ಕನ್ನಡದ ಸಹೃದಯರೆಲ್ಲಾ ಆಗಮಿಸಿ ಕಾರ್ಯಕ್ರಮವನ್ನು ಚಂದಗಾಣಿಸಿಕೊಟ್ಟರು. ಶ್ರೀ ನಾರಾಯಣ ನವಿಲೇಕರ್ ಸಭೆಯನ್ನುದ್ದೇಶಿಸಿ ಮಾತಾಡುತ್ತಿರುವುದು . ಹಿರಿಯ ಸದಸ್ಯ ಶ್ರೀ. ಕೆ. ಮಂಜುನಾಥಯ್ಯನವರು ಸಭೆಯನ್ನುದ್ದೇಶಿಸಿ ಮಾತಾಡುತ್ತಿರುವುದು ಡಾ. ಬಿ. ಆರ್. ಮಂಜುನಾಥ ಸಭೆಯನ್ನುದ್ದೇಶಿಸಿ ಮಾತಾಡುತ್ತಿರುವುದು ಕಾರ್ಯಕ್ರಮ ಪ್ರಸ್ತುತಿಯನ್ನು ಸಂಗೀತ ವಿದುಷಿ, ಶ್ರೀಮತಿ ಶ್ಯಾಮಲಾ ರಾಧೇಶ್ ಮಾಡುತ್ತಿರುವುದು ಕಾರ್ಯಕ್ರಮದ ಮೊದಲು ಸಮಿತಿಯ ಸದಸ್ಯರೆಲ್ಲ ದೀಪ ಬೆಳಗಿಸಿ ಶುಭಾರಂಭಮಾಡಿದರು. ಮೈಸೂರು ಅಸೋಸಿಯೇಷನ್ ನ ಕಾರ್ಯದರ್ಶಿ ಡಾ . ಗಣಪತಿ ಶಂಕರಲಿಂಗ ದೀಪ ಬೆಳಗಿಸುತ್ತಿರುವುದು ಕಾರ್ಯಕ್ರಮವನ್ನು ವೀಕ್ಷಿಸಲು ಬಂದ ಸಭಿಕರು ಸಂಗೀತ ಸ್ಪರ್ಧೆಯಲ್ಲಿ ವಿಜೇತರಾದವರು : ಪ್ರಥಮ ಪ್
ಮೈಸೂರು ಅಸೋಸಿಯೇಶನ್ ಮಾತುಂಗ ಮುಂಬಯಿನಲ್ಲಿ ವರ್ಷ ೨೦೨೩ ರ ಸೆಪ್ಟೆಂಬರ್, ೧೮, ರಿಂದ ೨೪, ಸೆಪ್ಟೆಂಬರ್ ೨೦೨೩ ರ ವರೆಗೆ ಸ್ವರ್ಣ ಗೌರಿ ಹಾಗೂ ಶ್ರೀ ಮಹಾಗಣಪತಿ ಪೂಜಾ ಮಹೋತ್ಸವವನ್ನು ಅತ್ಯಂತ ವಿಜೃಂಭಣೆ ಹಾಗೂ ವಿಧಿ ವಿಧಾನಗಳಿಂದ ನೆರೆವೇರಿಸಲಾಯಿತು. https://youtu.be/sCTzVvc-Thw?si=ZCJUSwc6RCbQ7ADP ಪ್ರತಿವರ್ಷದಂತೆ ಈ ವರ್ಷವೂ ಮುಂಬಯಿ ಮಹಾನಗರದ ಮೈಸೂರು ಅಸೋಸಿಯೇಷನ್ ನಲ್ಲಿ ಸ್ವರ್ಣ ಗೌರಿಯನ್ನು ೧೮, ಸೋಮವಾರ, ಸೆಪ್ಟೆಂಬರ್, ೨೦೨೩ ರಂದು ಪ್ರತಿಷ್ಠಾಪಿಸಲಾಯಿತು. ಮಹಾಗಣಪತಿಯನ್ನು ೧೯, ಮಂಗಳವಾರ ಸೆಪ್ಟೆಂಬರ್, ೨೦೨೩ ರಂದು ಪ್ರತಿಷ್ಠಾಪಿಸಲಾಯಿತು. ಪ್ರತಿದಿನವೂ ಮಹಾಗಣಪತಿ ಮತ್ತು ಸ್ವರ್ಣಗೌರಿಗೆ ಪೂಜೆಗಳನ್ನು ವಿಧಿವತ್ತಾಗಿ ನೆರೆವೇರಿಸಲಾಗುತ್ತಿದೆ. ೨೨ ಶುಕ್ರವಾರದಂದು ಅಸೋಸಿಯೇಶನ್ ನಲ್ಲಿ ಮಹಿಳೆಯರಿಗೆ ಅರಿಶಿನ-ಕುಂಕುಮ ಕಾರ್ಯಕ್ರಮದಲ್ಲಿ ಬಹಳಷ್ಟು ಮಹಿಳೆಯರು ಭಾಗವಹಿಸಿ ಕಾರ್ಯಕ್ರಮವನ್ನು ಚಂದಗಾಣಿಸಿದರು. ೨೪, ರವಿವಾರ, ಸೆಪ್ಟೆಂಬರ್ ೨೦೨೩ ರಂದು ಬೆಳಿಗ್ಯೆ ಅರ್ಚನೆ, ಗಣಪತಿಗೆ ಭಜನೆ, ನೃತ್ಯ ಮೊದಲಾದ ಪೂಜಾವಿಧಾನಗಳ ನಂತರ ಮಹಾ ಮಂಗಳಾರತಿಯ ನಂತರ ಗಣಪತಿ ಮತ್ತು ಸ್ವರ್ಣ ಗೌರಿಮೂರ್ತಿಗಳನ್ನು ಮುಂಬಯಿಯ ದಾದರ್ ಸಮುದ್ರ ಬೀಚ್ ನಲ್ಲಿ ವಿಸರ್ಜಿಸಲಾಯಿತು. ತದನಂತರ ಪ್ರಸಾದ ವಿನಿಯೋಗ, ಮೊದಲಾದ ಕಾರ್ಯಕ್ರಮಗಳಿಂದ ಕಾರ್ಯಕ್ರಮ ಸಂಪನ್ನ ಗೊಂಡಿತು. ಮೈಸೂರು ಅಸೋಸಿಯೇಷನ್ ನ ಸದಸ್ಯರೆಲ್ಲ ಹೆಚ್ಚಿನ ಸಂಖ್ಯೆಯಲ್ಲಿ
ಶ್ರೀ ಸುಬ್ರಾಯ ಚೊಕ್ಕಾಡಿಯವರ ಉಪಸ್ಥಿತಿ ; ಮುಂಬಯಿ ವಿಶ್ವವಿದ್ಯಾಲಯದ ಕನ್ನಡ ವಿಭಾಗದಲ್ಲಿ ! ಶ್ರೀ. ಸುಬ್ರಾಯ ಚೊಕ್ಕಾಡಿಯವರು ಮುಂಬಯಿ ವಿಶ್ವವಿದ್ಯಾಲಯದ ಕನ್ನಡ ವಿಭಾಗದಲ್ಲಿ ಹಮ್ಮಿಕೊಂಡ " ಕಾವ್ಯ ಸಂವಾದ ಕಾರ್ಯಕ್ರಮ" ದಲ್ಲಿ ಆಹ್ವಾನಿತರಾಗಿದ್ದರು. ಕನ್ನಡ ವಿಭಾಗದ ಮುಖ್ಯಸ್ಥ ಡಾ. ಜಿ. ಏನ್. ಉಪಾಧ್ಯ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿಕೊಂಡಿದ್ದರು. ಅವರು ತಮ್ಮ ವಿಚಾರವನ್ನು ಮಂಡಿಸುತ್ತಾ 'ಯುವ ಕವಿಗಳು ಕವಿತೆ ಬರೆಯುವುದನ್ನು ಲಘುವಾಗಿ ಪರಿಗಣಿಸಬಾರದು. ಛಂದಸ್ಸು ಬಹಳ ಮುಖ್ಯ. ಇಂದಿನ ಯುಗದಲ್ಲಿ ಲಯಕ್ಕೆ ಹೆಚ್ಚು ಮಹತ್ವ ಕೊಡುತ್ತಿಲ್ಲ. ಅದು ಸಲ್ಲದು 'ಎಂದು ನುಡಿದರು. ಮುಂದುವರೆಯುತ್ತಾ " ಯುವ ಕವಿಗಳ ಎಲ್ಲ ಧ್ವನಿಯಲ್ಲೂ ಲಯ ಇದ್ದೇ ಇರುತ್ತದೆ. ಸಾಮಾನ್ಯವಾಗಿ ಖುಷಿಗಿಂತ ನೋವಿನಲ್ಲೇ ಅತ್ಯಂತ ಪರಿಣಾಮಕಾರಿಯಾದ ಕವಿತೆಗಳು ಅರಳಿವೆ ಎನ್ನುವುದು ತಮ್ಮ ಅನಿಸಿಕೆ" ಎಂದು ಹೇಳಿದರು ಶ್ರೀ. ಸುಬ್ರಾಯ ಚೊಕ್ಕಾಡಿಯವರ ಹೆಚ್ಚುಗಾರಿಕೆ ಇರುವುದು, ನವ್ಯ ಕಾವ್ಯ ಪರಂಪರೆಯನ್ನು ಆಲಿಂಗಿಸಿದರೂ ತಮ್ಮತನ, ಮತ್ತು ತಮ್ಮದೇ ಆದ ವರ್ಚಸ್ಸನ್ನು ಬೆಳೆಸಿಕೊಂಡು ಕಾಯ್ದಿಟ್ಟುಕೊಂಡಿದ್ದು. ಹೀಗೆ ಮುಂದುವರೆದ ಅವರು ಡಾ. ಜಿ. ಎಸ್.ಎಸ್, ಡಾ. ನಿಸಾರ್ ಅಹ್ಮದ್, ಡಾ. ಎಚ್ಚೆಸ್ವಿ , ನಾಡೋಜ ಚನ್ನವೀರ ಕಣವಿ, ಮೊದಲಾದವರ ಸಾಲಿನಲ್ಲಿ ಕಾಣಿಸಿಕೊಳ್ಳುತ್ತಾರೆ. ಅವರ ಬಾಲ್ಯ ಹಾಗೂ ಜೀವನದ ಬಗ್ಗೆ ಒಂದು ನೋಟ : ಸುಬ್ರಾಯ
Comments