ಖ್ಯಾತ ಸಿನಿಮಾಟೋಗ್ರಾಫರ್, ವಿ. ಕೆ. ಮೂರ್ತಿಯವರು ಹಲವಾರು ಪ್ರಖ್ಯಾತ ಚಿತ್ರನಿರ್ಮಾಪಕರು, ನಿರ್ದೇಶಕರು, ಕಲಾವಿದರುಗಳೊಂದಿಗೆ ಕೆಲಸಮಾಡಿದ್ದಾರೆ. ಇವೆಲ್ಲದರ ಬಗ್ಗೆ ಬೆಳಕುಚೆಲ್ಲುವ ಒಂದು ’ಚಿತ್ರಪ್ರದರ್ಶನವನ್ನು ಆಯೋಜಿಸಲಾಗಿತ್ತು !


’(ಮೈಸೂರ್  ಅಸೋಸಿಯೇಷನ್ ಸೌಜನ್ಯದಿಂದ )’


ವಿ. ಕೆ. ಮೂರ್ತಿಯವರು ಚಿತ್ರೀಕರಿಸಿದ ಹಲವಾರು ಹಿಂದಿ-ಚಲನಚಿತ್ರಗಳ ವಿಶೇಷ ಸಂದರ್ಭಗಳನ್ನು ಪ್ರಸ್ತುತಪಡಿಸುವ ’ಚಿತ್ರಪ್ರದರ್ಶನ,’ ಚಿತ್ರ-ರಸಿಕರಿಗೆ ಮುದಕೊಟ್ಟಿತು.

’ಮೈಸೂರ್ ಅಸೋಸಿಯೇಷನ್,’ ಮತ್ತು ಕೆಳಗೆ ನಮೂದಿಸಿದ ಸಂಘ-ಸಂಸ್ಥೆಗಳು ಅವರನ್ನು ಸನ್ಮಾನಿಸಲು ಜಂಟಿಯಾಗಿ ಭಾಗವಹಿಸಿವೆ.

ಮೈಸೂರ್ ಅಸೋಸಿಯೇಶನ್ ಜೊತೆಯಲ್ಲಿ ಹೆಗಲಿಗೆ ಹೆಗಲು ಕೊಟ್ಟು ಸಹಕರಿಸಿದ ಸಂಘ ಸಂಸ್ಥೆಗಳು.
ಕಾರ್ಯಕ್ರಮ  ಮೊದಲು, ಅಸೋಸಿಯೇಷನ್ ಯುವ ಪ್ರತಿಭೆ, ಪದ್ಮನಾಭ ಶೆಟ್ಟಿಯವರಿಂದ, ’ವಂದೇ ಶಾರದೆ ವೀಣಾಧಾರಿಣಿ ಮಾತಾ,’ ಎಂಬ ಸುಂದರ ಗೀತೆಯೊಂದಿಗೆ ಆರಂಭವಾಯಿತು !

ಮೂರ್ತಿಯವರ ಛಾಯಾಗ್ರಹಣದ ಪಾಲುದಾರರ ಜೊತೆ....

ಗ್ರೆಗೊರಿ ಪೆಕ್, ಮತ್ತು ಮೂರ್ತಿ, ಹಾಗೂ ಗೆಳೆಯ, ಗ್ರೀಸ್ ನಲ್ಲಿ...
’ಮೈಸೂರ್ ಅಸೋಸಿಯೇಷನ್ ” ನ, ಹಿರಿಯ-ಸಮರ್ಥ ಕಾರ್ಯಕರ್ತರುಗಳಲ್ಲೊಬ್ಬರಾದ,  ಶ್ರೀ. ಕೆ. ಮಂಜುನಾಥಯ್ಯನವರು, ಕಾರ್ಯಕ್ರಮದ ಕೊನೆಯಲ್ಲಿ ವಂದನಾರ್ಪಣೆ ಮಾಡಿದರು. ಮೈಸೂರ್ ಅಸೋಸಿಯೇಷನ್ ನ ಇತಿಹಾಸದ ಬಗೆಗೆ, ಅಧಿಕೃತವಾಗಿ ಮಾತಾಡಬಲ್ಲ ಹಿರಿಯ ಸದಸ್ಯರಲ್ಲಿ, ಮಂಜುನಾಥಯ್ಯನವರು ಮುಂದಿದ್ದಾರೆ..

ವೇದಿಕೆಯ ಮೇಲೆ, ಶ್ರೀಮತಿ.  ಉಮಾ ಪ್ರಭಾಕರ್  ರಾವ್, ಬೆನೆಗಲ್, ಮೂರ್ತಿ, ಮತ್ತು ಮನಮೋಹನ್ ಶೆಟ್ಟಿಯವರು...
ಸಭಾಂಗಣದಲ್ಲಿ ಕಾರ್ಯಕ್ರಮವನ್ನು ವೀಕ್ಷಿಸುತ್ತಿರುವವರು : ಡಾ. ಪ್ರಭಾಕರ್ ರಾವ್, ಶ್ರೀಮತಿ. ರಾಮಭದ್ರ, ಶ್ರೀಮತಿ. ಉಮಾಪ್ರಭಾಕರ್ ರಾವ್, ಶ್ರೀಮತಿ. ಶಾರದಮ್ಮ ನಾರಾಯಣ ಸ್ವಾಮಿ, ಶ್ರೀಮತಿ. ಪೂರ್ಣಿಮಾ ಶ್ರೀಕೃಷ್ಣ, ಹಾಗೂ ನಿವೃತ್ತ ಜಸ್ಟಿಸ್. ಶ್ರೀ. ಶ್ರೀಕೃಷ್ಣ .
ಸಭಿಕರ ಮಧ್ಯೆ, ಶ್ರೀ ವಿ. ಕೆ. ಮೂರ್ತಿಯವರೂ ಇದ್ದಾರೆ. ಅವರ ಬಲಕ್ಕೆ, ಅಸೋಸಿಯೇಷನ್ ನ ಅಧ್ಯಕ್ಷ, ಶ್ರೀ. ರಾಮಭದ್ರ, ಮತ್ತು ಎಡಕ್ಕೆ, ಶ್ರೀ.ಶ್ಯಾಮ್ ಬೆನೆಗಲ್ ಮತ್ತು ಶ್ರೀ. ಮನಮೋಹನ್ ಶೆಟ್ಟಿಯವರು ಕುಳಿತಿದ್ದಾರೆ.

ಮೈಸೂರ್ ಅಸೋಸಿಯೇಷನ್ ಸದಸ್ಯರ ಜೊತೆಯಲ್ಲಿ...

’ಬಿಸಿಲು ಕೋಲು ಲೇಖಕಿ,”  ಶ್ರೀಮತಿ. ಉಮಾ ಪ್ರಭಾಕರ್  ರಾವ್, ರಾಮಭದ್ರ, ಮತ್ತು  ಶ್ರೀಕೃಷ್ಣ...
ಶ್ರೀ. ವಿ. ಕೆ. ಮೂರ್ತಿಯವರು ಕೊನೆಯಲ್ಲಿ ಕನ್ನಡ ಭಾಷೆಯಲ್ಲಿ ತಮ್ಮ ಅನಿಸಿಕೆಗಳನ್ನು ಎಲ್ಲರೊಡನೆ ಹಂಚಿಕೊಂಡರು...
’ಮೈಸೂರ್ ಅಸೋಸಿಯೇಷನ್” ನ, ಹಿರಿಯ ಅತಿ ಸಮರ್ಥ ಕಾರ್ಯಕರ್ತರಲ್ಲೊಬ್ಬರಾದ, ಡಾ. ಬಿ. ಆರ್. ಮಂಜುನಾಥ್, ತಮ್ಮ ಭಾಷಣದಲ್ಲಿ ಅಸೋಸಿಯೆಷನ್ ನಡೆದುಬಂದ ಹಾದಿಯನ್ನು ವಿವರಿಸಿದರು. ಶುರುವಿನಿಂದಲೂ ಅಸೋಸಿಯೆಷನ್ ನ ಹಲವಾರು ಮಹನೀಯರುಗಳು, ಮುಖ್ಯವಾಗಿ, ಶ್ರೀ. ಆರ್. ನಾಗೇಂದ್ರ ರಾವ್ ರಂತಹ ಚತುರ ನಟರು, ಹೇಗೆ ನಾಟಕ-ಕಲೆಯನ್ನು ಪೋಷಿಸಿ ನೀರೆರೆದರು ; ಮತ್ತು ಅವರ ಅಪೂರ್ವ ಯೋಗದಾನಗಳ ವಿವರಗಳನ್ನು ಸಭಿಕರೊಂದಿಗೆ ಹಂಚಿಕೊಂಡರು. ಶ್ರೀ. ಮಂಜುನಾಥ್, ಸ್ವತಃ ಒಬ್ಬ ಪ್ರಭಾವಿ ನಾಟಕ ಕರ್ತೃ, ನಟ, ಮತ್ತು ನಿರ್ದೇಶಕ. ಹಲವಾರು ನಾಟಕಗಳು ಅವರ ನಿರ್ದೇಶನದಲ್ಲಿ ಮುಂಬೈನಗರದಲ್ಲಿ ಹಾಗೂ ಬೆಂಗಳೂರಿನಲ್ಲಿ, ಪ್ರದರ್ಶಿಸಲ್ಪಟ್ಟಿವೆ.
ಶ್ರೀಮತಿ. ಶಾರದಮ್ಮನವರು, ಮೂರ್ತಿಯವರಿಗೆ ಹೂ-ಗುಚ್ಛವನ್ನು ನೀಡಿ ಗೌರವಿಸಿದರು..
’ಬಿಸಿಲು ಕೋಲು,’ ಶ್ರೀಮತಿ. ಉಮಾ ಪ್ರಭಾಕರ್  ರಾವ್ ಬರೆದ, ’ವಿ. ಕೆ.  ಮೂರ್ತಿಯವರ ಆತ್ಮ ಚರಿತ್ರೆ”.. ಅವರು ಸಭಿಕರೊಂದಿಗೆ ತಮ್ಮ ಅನಿಸಿಕೆಗಳನ್ನು ಹಂಚಿಕೊಳ್ಳುತ್ತಿದ್ದಾರೆ.
ಇಂದಿನ ದಿನಗಳಲ್ಲಿ ಪ್ರಸಿದ್ಧಿ ಪಡೆದು ಸಕ್ರಿಯವಾಗಿ ದುಡಿಯುತ್ತಿರುವ, ಬಾಲಿವುಡ್ ಕ್ಯಾಮರಾಮನ್, ಶ್ರೀ. ಅನಿಲ್ ಮೆಹ್ತಾ, ಮೂರ್ತಿಯವರನ್ನು ಅಭಿನಂದಿಸುತ್ತಿದ್ದಾರೆ.
’ಕೊಡಕ್ ಇಂಡಿಯ. ’ ದ ಅಧಿಕಾರಿಗಳು ಶ್ರೀ. ವಿ. ಕೆ. ಮೂರ್ತಿಯವರನ್ನು ಅಭಿನಂದಿಸುತ್ತಿರುವುದು..
ಶ್ರೀ. ಗೋವಿಂದ್ ನಿಹಲಾನಿಯವರು, ಮೂರ್ತಿಯವರಿಗೆ ’ಸ್ಮೃತಿ ಪಟ ’ ವನ್ನು ನೀಡಿ ಗೌರವ ಸೂಚಿಸಿದರು...
ಶ್ರೀ. ಮನಮೋಹನ್ ಶೆಟ್ಟಿಯವರು ಸಭಿಕರನ್ನುದ್ದೇಶಿಸಿ ಮಾತಾಡಿದರು..
ಮೈಸೂರ್ ಅಸೋಸಿಯೇಷನ್ ನ ಅಧ್ಯಕ್ಷರಾಗಿರುವ, ಶ್ರೀ. ರಾಮಭದ್ರರು, ಸಭೆಯನ್ನುದ್ದೇಶಿಸಿ ಮಾತನಾಡುತ್ತಿರುವುದು.
ಸಿನಿ ಫ್ರೆಟರ್ನಿಟಿಯ, ಶ್ರೀ. ಗೋವಿಂದ್ ನಿಹಲಾನಿಯವರು, ಕಾರ್ಯಕ್ರಮವನ್ನು ಸುಂದರವಾಗಿ ನಡೆಸಿಕೊಟ್ಟರು..
ಅಸೋಸಿಯೇಷನ್ ನ ಯುವ-ಸದಸ್ಯ, ಕರ್ನಾಟಕ ಸಂಗೀತದಲ್ಲಿ ಸಾಕಷ್ಟು ಕೃಷಿಮಾಡಿರುವ, ಶ್ರೀ. ಪದ್ಮನಾಭ ಶೆಟ್ಟಿಯವರು, ತಮ್ಮ ಪ್ರಾರ್ಥನಾಗೀತೆಯಿಂದ ಸಭಿಕರ ಮನಸ್ಸನ್ನು ಸೂರೆಗೊಂಡರು..
೨೧ ಮಾರ್ಚ್, ರವಿವಾರ, ೨೦೧೦ ರಂದು ಮೈಸೂರ್ ಅಸೋಸಿಯೇಷನ್, ಕನ್ನಡ ಸಂಘಸಂಸ್ಥೆಗಳು ಹಾಗೂ ಕೊಡಕ್ ಇಂಡಿಯ, ಸಿನೆಮಟೋಗ್ರಾಫೆರ್ಸ್ ಗಿಲ್ಡ್ ಒಟ್ಟಾಗಿ ಕುಟ್ಟಿಯವರನ್ನು ಗೌರವಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಮೈಸೂರ್ ಅಸೋಸಿಯೇಷನ್ ನ ಪದಾಧಿಕಾರಿಗಳು, ಶ್ರೀ. ವಿ. ಕೆ. ಮೂರ್ತಿಯವರಿಗೆ ಶಾಲು ಹೊದಿಸಿ, ಪುಷ್ಪಗುಚ್ಛವನ್ನು ನೀಡಿ ತಮ್ಮ ಪ್ರೀತಿ-ಗೌರವಗಳನ್ನು ಪ್ರಕಟಿಸಿದರು. ನಿಂತಿರುವವರು : ಶ್ರೀ. ನಾರಾಯಣ ನವಿಲೇಕರ್, ಶ್ರೀಮತಿ. ಉಮಾಪ್ರಭಾಕರ್ ರಾವ್, ಶ್ರೀ. ಶ್ಯಾಮ್ ಬೆನೆಗಲ್, ಶ್ರೀ. ವಿ. ಕೆ. ಮೂರ್ತಿ, ಶ್ರೀ. ರಾಮಭದ್ರ, ಶ್ರೀಮತಿ. ಲಕ್ಷ್ಮೀ ಸೀತಾರಾಂ, ಮತ್ತು ಶ್ರೀ. ಮನಮೋಹನ್ ಶೆಟ್ಟಿಯವರು.
ಮೈಸೂರ್ ಅಸೋಸಿಯೇಷನ್ ನ ಪತ್ರಿಕೆ, ನೇಸರುವಿನ ವಿಶೇಷಾಂಕವನ್ನು ಶ್ರೀ. ಶ್ಯಾಮ್ ಬೆನೆಗಲ್ ರವರು ಬಿಡುಗಡೆಮಾಡಿದಾಗ..
ಬಾಲಿವುಡ್ ಚಿತ್ರಗಳನ್ನು ಒಳಗೊಂಡ ಚಿತ್ರ ಪ್ರದರ್ಶನ ಕಾರ್ಯಕ್ರಮದಲ್ಲಿ ಚಿತ್ರ ರಸಿಕರು, ಸಂತಸವನ್ನು ವ್ಯಕ್ತಪಡಿಸುತ್ತಿರುವುದು.
ದೀಪ ಹಚ್ಚುವುದರ ಮೂಲಕ, ಕಾರ್ಯಕ್ರಮದ ಶುಭಾರಂಭವಾಯಿತು... ಮೂರ್ತಿಯವರ ಪಕ್ಕದಲ್ಲಿ ಶ್ರೀ. ಕೆ. ಮಂಜುನಾಥಯ್ಯನವರು ಕೆಲವು ಹಳೆಯ ಸಂತಸದ ಕ್ಷಣಗಳನ್ನು ಮೂರ್ತಿಯವರೊಡನೆ ಹಂಚಿಕೊಳ್ಳುತ್ತಿದ್ದಾರೆ.
ಶ್ರೀಮತಿ. ಆಶಾಪರೇಖ್, ಮತ್ತು ಶ್ರೀ ಗಿರೀಶ್ ಕಾರ್ನಾಡ್....
ಹಾಲಿವುಡ್ ನ ಮಿ. ಗ್ರೆಗೊರಿ ಪೆಕ್, ಮತ್ತು ಮೂರ್ತಿಯವರು ಮತ್ತು ಅವರ ಗೆಳೆಯ, ’ಗ್ರೀಸ್ ದೇಶದಲ್ಲಿ’...
ಶ್ರೀ. ಕೆ. ಎನ್. ಸಿಂಗ್, ಮತ್ತು ಶ್ರೀಮತಿ. ಗೀತಾ ಬಾಲಿ ಮತ್ತು ಇತರರು....

ಶ್ರೀ. ಅಮಿತಾಬ್ ಬಚ್ಚನ್, ಶ್ರೀಮತಿ. ಹೇಮಾಮಾಲಿನಿ ಮತ್ತು ಇತರರು...


ಶ್ರೀಮತಿ. ವಹೀದಾ ರೆಹಮಾನ್, ಮತ್ತು ಶ್ರೀ. ಜಾನಿವಾಕರ್.....
ಶ್ರೀಮತಿ. ಶಬ್ನಾ ಅಝ್ಮಿ, ಮತ್ತು ಶ್ರೀಮತಿ. ವಿದ್ಯಾಬಾಲನ್ ಮತ್ತು ಇತರ ಕಲಾವಿದರು..
ಶ್ರೀ. ಧರ್ಮೇಂದ್ರ, ರಿಶಿ ಕಪೂರ್ ಮತ್ತಿತರು..
ಮೂರ್ತಿಯವರ ಪರಿವಾರ, ತಂದೆ ತಾಯಿಗಳು,


ಶ್ರೀ. ಸುನಿಲ್ ದತ್, ಶ್ರೀಮತಿ. ವೈಜಯಂತಿಮಾಲಾ ಮತ್ತು ಮಾದಕ ನಗುವಿನ ಶ್ರೀಮತಿ. ಶಕಿಲಾ....

’ಫಿಲ್ಮ್ ಫೇರ್ ಅವಾರ್ಡ್,’ ಸಂದರ್ಭದಲ್ಲಿ ಶ್ರೀಮತಿ. ಪ್ರತಿಭಾದೇವಿ ಪಾಟೀಲ್ ಜೊತೆ....
ಶ್ರೀ. ವಿ. ಕೆ. ಮೂರ್ತಿ, ಶ್ರೀಮತಿ. ಸಂಧ್ಯಾ ಮೂರ್ತಿ, ಮತ್ತು ಮಗಳು, ಚಿ. ಛಾಯಾಮೂರ್ತಿ...
ಮೂರ್ತಿಯವರು ಸಿತಾರ್ ನುಡಿಸುತ್ತಿರುವುದು.
ಚಿ. ಸೌ. ಸಂಧ್ಯಾರವರ ಜೊತೆ ಮದುವೆ, ತಿರುಪತಿಯಲ್ಲಿ. ಗೆಳೆಯ ಶ್ರೀ. ಶ್ರೀನಿವಾಸನ್ ಮತ್ತು ಗೆಳೆಯ ಸುಬ್ಬರಾಮಯ್ಯ ಮತ್ತು ಅವರ ಪರಿವರ...
ಶ್ರೀಮತಿ. ಸಂಧ್ಯಾ, ಮತ್ತು ಮಗಳು. ಚಿ. ಛಾಯ....
ಪ್ರೀತಿಯ ಪತ್ನಿ, ಶ್ರೀಮತಿ. ಸಂಧ್ಯಾರವರ ಜೊತೆಯಲ್ಲಿ ಒಂದು ಸುಂದರ ಕ್ಷಣದಲ್ಲಿ...
ಬಿಡುವಿನ ವೇಳೆಯಲ್ಲಿ ಪುಸ್ತಕಗಳು ಅವರಿಗೆ ಮುದಕೊಡುತ್ತಿದ್ದವು.

ಹಿರಿಯ ನಟ, ಶ್ರೀ. ದಾದಾಮುನಿಯವರ ಜೊತೆ... ಜೀ ಹಾಂ.... ಶ್ರೀ ಅಶೋಕ್ ಕುಮಾರ್ ಜೊತೆ..
ಶ್ರೀ. ಗುರುದತ್ ಮತ್ತು ಶ್ರೀಮತಿ. ವಹೀದಾ ರೆಹಮಾನ್ ಒಂದು ಚಿತ್ರದಲ್ಲಿ..




೨೦೧೦ ರ ಮಾರ್ಚ್ ತಿಂಗಳ, ೨೧ ನೇ ತಾರೀಖಿನ ರವಿವಾರದಂದು, ಮೈಸೂರ್ ಅಸೋಸಿಯೇಷನ್ ನ 'ಮಿನಿ ಹಾಲ್ 'ನಲ್ಲಿ 'ಚಿತ್ರಪ್ರದರ್ಶನ ' ವಿತ್ತು. ನಂತರ 'ಅಸೋಸಿಯೇಷನ್ ನ ಸುಸಜ್ಜಿತ ಹಾಗೂ ಹವಾನಿಯಂತ್ರಿತ ಸಭಾಗೃಹ ' ದಲ್ಲಿ 'ಮೂರ್ತಿಯವರ ಸತ್ಕಾರ ಸಮಾರಂಭದ ಕಾರ್ಯಕ್ರಮ ' ವನ್ನು ಹಮ್ಮಿಕೊಳ್ಳಲಾಗಿತ್ತು.

Comments

This was one of the memorable events for the members of The Mysore Association. Murthy was instrumental in promoting art and culture, especially Acting. He brought out the hidden talents from the members, who were shy and not showing up...

Popular posts from this blog

"The Kannada division of Mumbai university", is celebrating 45th year !

98th, Foundation day of The Mysore Association celebrated on 4th, March, 2023 !

"ನೇಸರು ಜಾಗತಿಕ ಏಕಾಂಕ ನಾಟಕ ರಚನಾ ಸ್ಪರ್ಧೆ-2022ರ ಬಹುಮಾನ ವಿತರಣೆ ಹಾಗೂ ಕನ್ನಡ ನಾಟಕ- "ಚಿಟ್ಟೆ" ಪ್ರದರ್ಶನ !