ಭಾಷಾ ಭಾವೈಕ್ಯ ಸಮಾವೇಶ , ಮುಂಬೈನ ಮೈಸೂರ್ ಅಸೋಸಿಯೇಷನ್ ನಲ್ಲಿ !
ಇದನ್ನು ಹಮ್ಮಿಕೊಂಡಿರುವ ಸಂಸ್ಥೆಗಳು : ಮೈಸೂರ್ ಅಸೋಸಿಯೇಷನ್, ಮುಂಬೈ, ಬೆಂಗಳೂರಿನ ಕನ್ನಡ ಅಭಿವೃದ್ಧಿ ಪ್ರಾಧಿಕಾರ, ಹಾಗೂ ಮುಂಬೈ ವಿಶ್ವ ವಿದ್ಯಾಲಯದ ಕನ್ನಡ ವಿಭಾಗ : ಈ ಮೂರೂ ಸಂಸ್ಥೆಗಳು ಜಂಟಿಯಾಗಿ ಹಮ್ಮಿಕೊಂಡ, 'ಭಾಷಾ ಭಾವೈಕ್ಯ ಸಮಾವೇಶ' ಫೆಬ್ರವರಿ, ೧೯, ಹಾಗೂ ೨೦ ರಂದು, ಮುಂಬೈನ ಮಾಟುಂಗಾ ಉಪನಗರದಲ್ಲಿ ಜರುಗಿದವು. ಎರಡನೆಯ ದಿನದ ಕಾರ್ಯಕ್ರಮಕ್ಕೆ, ಅಂದರೆ, ತಾ. ೨೦, ರವಿವಾರ, ನಾನು ಹೋಗಿದ್ದು, ಅದರ ವಿವರಗಳನ್ನು ಕೆಳಗೆ ನಮೂದಿಸಿರುತ್ತೇನೆ. ರಾಮಚಂದ್ರ ಹಡಪದ್, ಖ್ಯಾತ ತತ್ವ ಪದ ಗಾಯಕ , ಕಾರ್ಯಕ್ರಮದ ಮೊದಲಿಗೆ, ಹಾಗೂ ಮಧ್ಯಾನ್ಹ ಭೋಜನದ ತರುವಾಯವೂ ಹಾಡಿದರು. ಅವರು ಹಾಡಿದ ಗೀತೆಗಳು : * ಗಜಮುಖ ವಂದಿಸುವೆ... * ವಚನ : ಕರಿಯ ನಿತ್ತರೆ ಒಲ್ಲೆ .. * ನಾರಾಯಣ ರಮಾರಮಣ ಮನಮೋಹನ... ಗೀತ ಸಂಗೀತ : ಡಾ. ಅನುಪಮ ಮಂಗಲವೇಡೆ (ಮಾಧವ ಗುಡಿಯವರ ಮಗಳು) ಖ್ಯಾತ ಗಾಯಕರು, ಮುಂಬೈ ಬೆಳಿಗ್ಯೆ ೧೧-೩೦ ಕ್ಕೆ, ಹಾಡಿದ ಗೀತೆಗಳು :